ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಕೀರನ್‌ ಗೋಪಾಲ್‌ಗೆ ಕೊಟ್ಟ ಮಾತಿಗೆ ತಪ್ಪಲಾರೆನು- ಕೃಷ್ಣ

By Staff
|
Google Oneindia Kannada News

ಬೆಂಗಳೂರು : ವರನಟ ರಾಜ್‌ ಅಪಹರಣ ಸಂದರ್ಭದಲ್ಲಿ ನರಹಂತಕ ವೀರಪ್ಪನ್‌ ಜೊತೆ ಸಂಧಾನಕ್ಕಾಗಿ ಕಾಡಿಗೆ ತೆರಳಿದ್ದ ನಕ್ಕೀರನ್‌ ಪತ್ರಿಕೆಯ ಸಂಪಾದಕ ಗೋಪಾಲ್‌ಗೆ ನೀಡಿದ್ದ ವಾಗ್ದಾನವನ್ನು ರಾಜ್ಯ ಸರ್ಕಾರ ಪಾಲಿಸುವುದೆಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸ್ಪಷ್ಟಪಡಿಸಿದ್ದಾರೆ.

ಫ್ರಂಟ್‌ಲೈನ್‌ ಸಂಪಾದಕ ಎನ್‌.ರಾಮ್‌ ಅವರ ನೇತೃತ್ವದಲ್ಲಿ ಗುರುವಾರ ತಮ್ಮನ್ನು ಭೇಟಿ ಮಾಡಿದ ಪ್ರೆಸ್‌ ಫ್ರೀಡಂ ಕಮಿಟಿ ಸದಸ್ಯರ ನಿಯೋಗಕ್ಕೆ ಕೃಷ್ಣ ಈ ಭರವಸೆ ನೀಡಿದರು. ನಕ್ಕೀರನ್‌ ಗೋಪಾಲ್‌ ಕೂಡ ಈ ನಿಯೋಗದಲ್ಲಿ ಹಾಜರಿದ್ದರು.

ನಕ್ಕೀರನ್‌ ವರದಿಗಾರ ಶಿವಸುಬ್ರಹ್ಮಣ್ಯಂಗೆ ಪೊಲೀಸರು ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಹಾಗೂ ಅವರ ಮೇಲಿನ ಕಿರುಕುಳ ಕುರಿತು ತನಿಖೆ ನಡೆಸಬೇಕು ಎನ್ನುವ ನಿಯೋಗದ ಬೇಡಿಕೆಯ ಪ್ರತಿಕ್ರಿಯಿಸಿದ ಕೃಷ್ಣ - ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಜ್‌ ವನವಾಸ ಪ್ರಕರಣದಲ್ಲಿ ಗೋಪಾಲ್‌ ವಹಿಸಿದ ಪಾತ್ರದ ಕುರಿತು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೃಷ್ಣ ನಿಯೋಗಕ್ಕೆ ತಿಳಿಸಿದರು. ಆದರೆ, ತಮಿಳುನಾಡಿನ ಜಯಲಲಿತಾ ಸರ್ಕಾರ ಗೋಪಾಲ್‌ ಮೇಲೆ ನಿರಂತರವಾಗಿ ಪೊಲೀಸರನ್ನು ಛೂ ಬಿಡುತ್ತಿದೆ.
(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X