ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಡ್ಸ್‌ ಪೀಡಿತ ಗಂಡನ ಸುಪಾರಿನೀಡಿ ಕೊಲ್ಲಿಸಿದ ಹೆಂಡತಿ

By Staff
|
Google Oneindia Kannada News

ಬೆಂಗಳೂರು :ಏಡ್ಸ್‌ ಪೀಡಿತ ಗಂಡನಿಂದ ತನಗೆ ಹಾಗೂ ತನ್ನ ಮಕ್ಕಳಗೆ ಅಪಾಯವಿದೆಯೆಂಬ ಆತಂಕದಿಂದ ಗೆಳೆಯನಿಗೆ ಸುಪಾರಿ ನೀಡಿ ಗಂಡನನ್ನು ಕೊಲ್ಲಿಸಿದ ಪತ್ನಿ ಈಗ ಪೊಲೀಸರ ಅತಿಥಿ.

ಪ್ರಶಾಂತ ನಗರದ ನಿವಾಸಿ ಚಿಕ್ಕವೀರಪ್ಪನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ರಾಜೇಶ್ವರಿ, ಗೋವಿಂದರಾಜನಗರದ ನಿವಾಸಿ ಅನಿಲ್‌ಕುಮಾರ್‌ ಹಾಗೂ ಪ್ರಶಾಂತನಗರದ ಗಿರೀಶ್‌ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಇಬಿ ಲೈನ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದ ಚಿಕ್ಕವೀರಪ್ಪ ಏಡ್ಸ್‌ರೋಗಕ್ಕೆ ತುತ್ತಾಗಿದ್ದು, ಕೆಸಿ ಜನರಲ್‌ ಹಾಗೂ ಬಾಣಸವಾಡಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದ . ಗಂಡ ಬದುಕಿದ್ದರೆ ತನಗೆ ಹಾಗೂ ಮಕ್ಕಳಿಗೆ ಅಪಾಯ ಎಂದು ಭಾವಿಸಿದ ರಾಜೇಶ್ವರಿ, ತನಗೆ ಪರಿಚಯವಿದ್ದ ಅನಿಲ್‌ಕುಮಾರ್‌ ಹಾಗೂ ಗಿರೀಶ್‌ಕುಮಾರ್‌ಗೆ 40 ಸಾವಿರ ರುಪಾಯಿ ಹಣ ನೀಡಿ ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಸವೇಶ್ವರನಗರದ ಖಾಲಿ ನಿವೇಶನವೊಂದರಲ್ಲಿ ಚಿಕ್ಕವೀರಪ್ಪನ ಮೃತದೇಹ ದೊರೆತಿದ್ದು , ಕೊಲೆಯ ವಾಸನೆ ಬಡಿದ ಪೊಲೀಸರು ನಡೆಸಿದ ತನಿಖೆಯಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X