ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡು ಇಲ್ಲವೇ ಮಡಿ : ಅಂತಿಮ ಸಮರಕ್ಕೆಮೀನುಗಾರರು ಸಿದ್ಧ

By Staff
|
Google Oneindia Kannada News

ಬೆಂಗಳೂರು : ತೀವ್ರ ಸಂಕಷ್ಟ ಎದುರಿಸುತ್ತಿರುವ ಮೀನುಗಾರರು ಅಂತಿಮ ಹೋರಾಟಕ್ಕೆ ಸಿದ್ಧವಾಗಿದ್ದು , ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಜುಲೈ 25 ರಿಂದ ‘ಮಾಡು ಇಲ್ಲವೆ ಮಡಿ’ ಆಂದೋಲನ ಆರಂಭಿಸಲಿದ್ದಾರೆ.

ದೆಹಲಿ, ಮುಂಬಯಿ, ಚೆನ್ನೈ, ಭುವನೇಶ್ವರ, ತಿರುವನಂತಪುರ, ಪಣಜಿ, ಮಂಗಳೂರು, ವಿಶಾಖಪಟ್ಟಣ ಮತ್ತು ರಾಮನಾಥ್‌ನಲ್ಲಿ ಮೀನುಗಾರರ ಪ್ರತಿಭಟನೆ ಏಕಕಾಲದಲ್ಲಿ ನಡೆಯಲಿದೆ. ಬೇಡಿಕೆ ಈಡೇರುವವರೆಗೂ ಸರ್ಕಾರಿ ಕಚೇರಿಗಳ ಎದುರು ಪ್ರತಿಭಟನೆ ಮುಂದುವರಿಯುವುದು ಎಂದು ರಾಷ್ಟ್ರೀಯ ಮೀನುಗಾರರ ವೇದಿಕೆ ಅಧ್ಯಕ್ಷ ಹರಿಕೃಷ್ಣ ದೇಬನಾಥ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುರಾರಿ ಸಮಿತಿಯ ಎಲ್ಲ 21 ಶಿಫಾರಸ್ಸುಗಳನ್ನು ಜಾರಿಗೆ ತರಬೇಕು. ಮೀನುಗಾರರಿಗೆ ಸಹಾಯಧನದಲ್ಲಿ ಡೀಸೆಲ್‌ ಹಾಗೂ ಸೀಮೆಎಣ್ಣೆ ಪೂರೈಸಬೇಕು. ಮೀನು ಆಮದನ್ನು ನಿಲ್ಲಿಸಬೇಕು.. ಮುಂತಾದ ಬೇಡಿಕೆಗಳನ್ನು ವೇದಿಕೆ ಸರ್ಕಾರದ ಮುಂದಿಟ್ಟಿದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X