ದಾವಣಗೆರೆಯಲ್ಲಿ ಮಹಿಳಾ ಕೈಗಾರಿಕೋದ್ಯಮಿಗಳಿಗಾಗಿ ಸಹಾಯ ಕೇಂದ್ರ
ದಾವಣಗೆರೆ : ರಾಜ್ಯ ಮಹಿಳಾ ಅಭಿವೃದ್ಧಿ ಆಯೋಗ ಮತ್ತು ಮಹಿಳಾ ಕೈಗಾರಿಕೋದ್ಯಮಿಗಳ ಸಂಘ ಮಹಿಳೆಯರಿಗಾಗಿ ಮಾಹಿತಿ ಹಾಗೂ ಸಹಾಯ ಕೇಂದ್ರವನ್ನು ತೆರೆಯಲು ನಿರ್ಧರಿಸಿದೆ.
ಪ್ರೇರಣಾ ಸಂಘಟನೆಯಡಿಯಲ್ಲಿ ತಲೆಯೆತ್ತಿರುವ ಈ ಸಹಾಯ ಕೇಂದ್ರ ಜೂನ್ 10 ರಂದು ಕಾರ್ಯಾರಂಭ ಮಾಡಲಿದೆ. ಇಲ್ಲಿನ ವನಿತಾ ಸಮಾಜದ ಈ ಸಹಾಯ ಕೇಂದ್ರ ಮಹಿಳೆಯರಿಗೆ ಪ್ರತಿ ಹಂತದಲ್ಲಿಯೂ ನೆರವಾಗಲಿದೆ ಎಂದು ವನಿತಾ ಸಮಾಜದ ಅಧ್ಯಕ್ಷೆ ಹಾಗೂ ಮಾಜಿ ಸಚಿವೆ ನಾಗಮ್ಮ ಕೇಶವ ಮೂರ್ತಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೈಗಾರಿಕೆಗಳನ್ನು ಆರಂಭಿಸಲು, ಮಾರುಕಟ್ಟೆಯಲ್ಲಿ ಯಶಸ್ಸುಗಳಿಸಲು, ಸಣ್ಣ ಅಥವಾ ಭಾರೀ ಕೈಗಾರಿಕೆಗಳಲ್ಲಿ ದುಡಿಯುವ , ಅಥವಾ ಕೈಗಾರಿಕೆಗಳನ್ನು ನಿರ್ವಹಿಸುವ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ನಿವಾರಿಸಲು ಈ ಸಹಾಯ ಕೇಂದ್ರ ನೆರವಾಗಲಿದೆ.
ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಸಹಾಯ ಕೇಂದ್ರಗಳನ್ನು ಆರಂಭಿಸುವ ಯೋಚನೆ ಆಯೋಗಕ್ಕಿದೆ. ಪ್ರೇರಣಾ ಸಂಘಟನೆಯು ಮಹಿಳೆಯರಿಗಾಗಿ ಇತರೆಡೆಗಳಲ್ಲಿ ಸಹಾಯಕೇಂದ್ರಗಳನ್ನು ತೆರೆಯಲು ನೆರವಾಗಲಿದೆ ಎಂದು ನಾಗಮ್ಮ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...