ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಕೆಸಿ ಸೇರಿದಂತೆ 7ಮಂದಿ ವಿಧಾನಪರಿಷತ್‌ಗೆ ಅವಿರೋಧ ಆಯ್ಕೆ

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಸೇರಿದಂತೆ ಏಳು ಮಂದಿ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಾಟಾಳ್‌ ನಾಗರಾಜ್‌ ಅವರ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಯಿತು. ನಾಮಪತ್ರ ಅನುಮೋದನೆಗಾಗಿ ಪಡೆದಿದ್ದ 10 ಮಂದಿ ಶಾಸಕರ ಸಹಿಯಲ್ಲಿ - ಜಾತ್ಯತೀತ ಜನತಾದಳದ ಚೆನ್ನಿಗಪ್ಪ ಅವರು ತಮ್ಮ ಸಹಿಯನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದರಿಂದ ವಾಟಾಳ್‌ ಅವರ ನಾಮಪತ್ರ ತಿರಸ್ಕರಿಸಲಾಯಿತು.

ಎಂ.ವಿ.ರಾಜಶೇಖರನ್‌ ಅವರು ರಾಜ್ಯಸಭೆಗೆ ಆಯ್ಕೆಯಾಗಿ ತೆರವು ಮಾಡಿದ್ದ ಸ್ಥಾನವನ್ನು ಕೆ.ಸಿ.ಕೊಂಡಯ್ಯ ತುಂಬಿದ್ದಾರೆ. ವಿಧಾನ ಪರಿಷತ್ತಿಗೆ ಆಯ್ಕೆಯಾದ ಇತರರು-
ಸಲೀಂ ಅಹಮದ್‌, ಡಿ.ಮಾದೇಗೌಡ, ರತ್ನಾ ವಿ.ಕುಸನೂರ್‌, ಅಶೋಕ್‌ ಕಟ್ಟಿಮನಿ (ನಾಲ್ವರೂ ಕಾಂಗ್ರೆಸ್‌), ಡಾ.ವಿ.ಎಸ್‌.ಆಚಾರ್ಯ (ಬಿಜೆಪಿ) ಹಾಗೂ ಸಚ್ಚಿದಾನಂದ ಖೋತ್‌ (ಜೆಡಿಯು).
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X