ಯುದ್ಧ ನಡೆದರೆ ಕರ್ನಾಟಕ ಸಾಫ್ಟ್ವೇರ್ ಕತೆ ಗೋವಿಂದ : ಆರ್.ಕಮಲ
ಬೆಂಗಳೂರು : ಭಾರತ- ಪಾಕಿಸ್ತಾನದ ನಡುವಿನ ಯುದ್ಧ ಭೀತಿಯಿಂದಲೇ ಸ್ಟಾಕ್ ಮಾರ್ಕೆಟ್ ಅಲ್ಲಾಡುತ್ತಿದೆ. ಒಂದು ವೇಳೆ ಯುದ್ಧ ನಡೆದಲ್ಲಿ ಸಾಫ್ಟ್ವೇರ್ ಕಂಪನಿಗಳು ಬಿದ್ದು ಹೋಗುವ ಆತಂಕವಿದೆ ಎಂದು ಬೆಂಗಳೂರು ಸ್ಟಾಕ್ ಎಕ್ಸ್ಚೇಂಜ್ನ ಕಾರ್ಯಕಾರಿ ನಿರ್ದೇಶಕಿ ಆರ್.ಕಮಲ ಅಭಿಪ್ರಾಯ ಪಟ್ಟಿದ್ದಾರೆ.
ಶುಕ್ರವಾರ ಸುದ್ದಿಗಾರರೊಡನೆ ಅವರು ಮಾತಾಡುತ್ತಿದ್ದರು. ಬಂಡವಾಳ ಮಾರುಕಟ್ಟೆಯಲ್ಲಿ ಈಗಾಗಲೇ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ದಲ್ಲಾಳಿಗಳು ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ಶುರುವಿಟ್ಟಿದ್ದಾರೆ. ಈ ಮಾರುಕಟ್ಟೆಯಿಂದ ಕಾಲ್ತೆಗೆದು ಬೇರೆ ದಾರಿ ಕಂಡುಕೊಳ್ಳುವ ಪ್ರಯತ್ನಗಳನ್ನೂ ನಡೆಸಿದ್ದಾರೆ ಎಂದರು.
ಕರ್ನಾಟಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಚ್ಛನ್ನ ವಿದೇಶೀ ಬಂಡವಾಳದ ಮೇಲೂ ಯುದ್ಧವಾದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಐಟಿ ಸೇವೆಗಳ ದಿಗ್ಗಜನಾಗಿರುವ ಕರ್ನಾಟಕದತ್ತ ಜಾಗತಿಕ ಕಂಪನಿಗಳು ತಲೆ ಕೂಡ ಹಾಕದ ಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ ಎಂದು ಕಮಲ ಹೇಳಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ