ಆ್ಯಡ್ ಶೂಟಿಂಗ್ಗೆ ಹೋದರೆ ಟೀಂನಿಂದ ಕಿತ್ತು ಹಾಕ್ತೀನಿ : ದಾಲ್ಮಿಯಾ
ನವದೆಹಲಿ
:
ಇಂಗ್ಲೆಂಡ್
ಕ್ರಿಕೆಟ್
ಟೂರ್ಗೆ
ಹೋಗುವ
ಮುಂಚೆ
ಸೌತ್
ಆಫ್ರಿಕದಲ್ಲಿ
ಒಂದು
ಆ್ಯಡ್
ಶೂಟ್
ಮಾಡಿಕೊಂಡು
ಬರ್ತೀವಿ.
12
ದಿನ
ಅಪ್ಪಣೆ
ಕೊಡಿ
:
ಅನಿಲ್
ಕುಂಬ್ಳೆ,
ಜಾವಗಲ್
ಶ್ರೀನಾಥ್,
ರಾಹುಲ್
ದ್ರಾವಿಡ್,
ಹರ್ಭಜನ್
ಸಿಂಗ್,
ವೀರೇಂದ್ರ
ಶೆವಾಗ್
ಮತ್ತು
ಅಜಯ್
ರಾತ್ರಾ.
ಕೂಡದು.
ಮನೇಲಿ
ರೆಸ್ಟ್
ತಗೊಳ್ಳಿ.
ಹೋದರೆ,
ಟೀಂನಿಂದ
ಕಿತ್ತು
ಹಾಕುತ್ತೇನೆ
:
ಜಗನ್ಮೋಹನ
ದಾಲ್ಮಿಯಾ.
ಕೆರೇಬಿಯನ್ ಪ್ರವಾಸದಿಂದ ಭಾರತ ತಂಡ ಬಂದಿಳಿದ ನಂತರದ ಮಹತ್ವದ ಬೆಳವಣಿಗೆಯಿದು. ಸಾಮಾನ್ಯವಾಗಿ ಕ್ರಿಕೆಟ್ಟಿನಿಂದ ಬಿಡುವಿರುವಾಗ ಆಟಗಾರರು ಜಾಹೀರಾತುಗಳಿಗೆ ಮಾಡೆಲಿಂಗ್ ಮಾಡೋದು ಲಾಗಾಯ್ತಿನಿಂದ ನಡೆದು ಬಂದಿದೆ. ಆಫ್ಕೋರ್ಸ್, ಅದಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅದ್ಯಕ್ಷರ ಅನುಮತಿ ಬೇಕಿಲ್ಲ. ಆದರೆ ಈ ಬಾರಿ ಹೋದರೆ ಟೀಂನಿಂದಲೇ ಕಿತ್ತು ಹಾಕುತ್ತೇನೆ ಎಂದು ದಾಲ್ಮಿಯಾ ಕೊಟ್ಟಿರುವ ಎಚ್ಚರಿಕೆಗೆ ಆಟಗಾರರು ತಣ್ಣಗಾಗಿದ್ದಾರೆ.
ನಾನು ಆಟಗಾರರ ಒಳ್ಳೆಯದಕ್ಕೇ ಹೇಳಿದ್ದು. ಕ್ರಿಕೆಟಿಗರಿಗೆ ವಿಶ್ರಾಂತಿ ಬಹಳ ಮುಖ್ಯ. ಈ ಬಾರಿ ಸಾಕಷ್ಟು ಬಿಡುವು ಇಲ್ಲ. ಈ ಚಿಕ್ಕ ಬ್ರೇಕ್ನಲ್ಲಿ ದಕ್ಷಿಣ ಆಫ್ರಿಕಕ್ಕೂ ಹೋಗಿ ಬಂದರೆ, ಆಟದ ಮೇಲೆ ಪರಿಣಾಮವಾಗುತ್ತದೆ ಅನ್ನುವ ಕಾರಣಕ್ಕೆ ಆಟಗಾರರಿಗೆ ಕಿವಿಮಾತು ಹೇಳಿದೆ. ಇದರಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ ಎನ್ನುತ್ತಿದ್ದಾರೆ ದಾಲ್ಮಿಯಾ.
ಜಾಹೀರಾತಿಗೆ ಅನುಮತಿ ಕೋರಿರುವ ಕ್ರಿಕೆಟಿಗರನ್ನು ಈ ಬಗ್ಗೆ ಕೇಳಿದರೆ, ತುಟಿ ಬಿಚ್ಚುತ್ತಿಲ್ಲ . ಜೂನ್ 08, ಶನಿವಾರ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುವ ತಂಡದ ಆಯ್ಕೆಯಿದೆ. ಜೂನ್ 18ಕ್ಕೆ ತಂಡ ವಿಮಾನ ಹತ್ತಲಿದೆ. ಶ್ರೀಲಂಕಾ- ಇಂಗ್ಲೆಂಡ್ ಜೊತೆ ಮೊದಲು ಒಂದು ದಿನಗಳ ತ್ರಿಕೋನ ಸರಣಿ. ನಂತರ ನಾಲ್ಕು ಟೆಸ್ಟ್. ಇದು ವೇಳಾ ಪಟ್ಟಿಯ ಸಾರ.
ಅಂದಹಾಗೆ, ಶ್ರೀನಾಥ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗೋದಕ್ಕೂ ದಾಲ್ಮಿಯಾ ಕೊಟ್ಟಿರುವ ಎಚ್ಚರಿಕೆಗೂ ಸಂಬಂಧ ಇದೆಯಾ? ಇಲ್ಲವೇ ಇಲ್ಲ ಅಂತ ಸಾರಾಸಗಟಾಗಿ ತಳ್ಳಿ ಹಾಕೋದಕ್ಕಂತೂ ಸಾಧ್ಯವಿಲ್ಲ. ಏನಂತೀರಿ?
ಮುಖಪುಟ / ಇವತ್ತು... ಈ ಹೊತ್ತು...