ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಂತ್ರಾಲಯ ಉತ್ತರಾಧಿಕಾರಿಯನ್ನು ಗುರುತಿಸುವ ಹಕ್ಕು ರಾಜ್ಯಕ್ಕಿಲ್ಲ’

By Staff
|
Google Oneindia Kannada News

ರಾಯಚೂರು: ಮಂತ್ರಾಲಯದ ಉತ್ತರಾಧಿಕಾರಿ ಎಂದು ಗುರುವೆಂಕಟಾಚಾರ್‌ ಅವರನ್ನು ಗುರುತಿಸುವ ಹಕ್ಕು ಕರ್ನಾಟಕ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಇಲ್ಲ ಎಂದು ರಾಜ್ಯ ಶ್ರೇಷ್ಠ ನ್ಯಾಯಾಲಯದ ವಿಭಾಗೀಯ ಪೀಠ ತೀರ್ಪು ನೀಡಿದೆ.

ಒಂದು ವೇಳೆ ಗುರುತಿಸಿದರೂ ಅದು ಕಾನೂನಿಗೆ ವಿರುದ್ಧವಾಗುತ್ತದೆ ಎಂದು ಕೋರ್ಟ್‌ ಪೀಠ ಹೇಳಿದೆ. ರಾಯರ ಮಠದ ಸಂಪ್ರದಾಯ ಹಿತರಕ್ಷಣಾ ಸಮಿತಿಯು ಈ ವಿಷಯವನ್ನು ಬಹಿರಂಗಪಡಿಸಿದ್ದು, ರಿದ್ದಿ ವಾದಿರಾಜಾಚಾರ್‌ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಕೆ. ಎಲ್‌. ಮಂಜುನಾಥ ಮತ್ತು ನ್ಯಾಯಮೂರ್ತಿ ಕೆ. ರಾಮಣ್ಣ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆಗೆ ಅಂಗೀಕರಿಸಿ ಸ್ಪಷ್ಟ ಆದೇಶ ಹೊರಡಿಸಿದೆ.

ಆಂಧ್ರಪ್ರದೇಶದ 1987ನೇ ಇಸವಿಯ ಧಾರ್ಮಿಕ ದತ್ತಿ ಕಾಯ್ದೆಗೆ ಮಂತ್ರಾಲಯ ರಾಯರಮಠ ಒಳಪಟ್ಟಿದೆ. ಗುರುವೆಂಕಟಾಚಾರ್‌ ಅವರನ್ನು ಮಠದ ಉತ್ತರಾಧಿಕಾರಿಯನ್ನಾಗಿ ಮಾನ್ಯ ಮಾಡಬೇಕು ಎಂದು ಪೀಠಾಧೀಶ ಸುಶಮೀಂದ್ರ ಸ್ವಾಮೀಜೀ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ರಾಜ್ಯ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಆಯುಕ್ತರು ಸ್ವೀಕರಿಸಬಾರದು ಎಂದು ಕೋರ್ಟ್‌ ಸೂಚಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X