ಬಂಡಲಹಳ್ಳಿಯಲ್ಲಿ ಗೋಡೆ ಬಿದ್ದು ಸಕ್ಕರೆನಿದ್ದೆಯಲ್ಲಿದ್ದ 6 ಮಂದಿ ಸಾವು
ಬೆಂಗಳೂರು : ಸಕ್ಕರೆ ನಿದ್ದೆಯಲ್ಲಿದ್ದ ನಾಲ್ವರು ಮಕ್ಕಳೂ ಸೇರಿದಂತೆ ಕೋಲಾರ ಜಿಲ್ಲೆಯ ಬಂಡಲಹಳ್ಳಿಯ 6 ಮಂದಿ ಕುಸಿದ ಗೋಡೆ ಮೇಲೆ ಬಿದ್ದು, ಮೃತ ಪಟ್ಟಿದ್ದಾರೆ.
ಮೃತಪಟ್ಟವರನ್ನು ನರಸಿಂಹ ಮೂರ್ತಿ (28), ಆತನ ಪತ್ನಿ ಗಂಗವ್ವ (25), ಮಕ್ಕಳು ಸಾವಿತ್ರಿ ಮತ್ತು ಪುಷ್ಪ (ಕ್ರಮವಾಗಿ 8 ಮತ್ತು 5 ವರ್ಷ) ಹಾಗೂ ಮನೆಗೆ ಬಂದಿದ್ದ ಬಂಧು ಮಕ್ಕಳಾದ ಅನಿಲ್ ಕುಮಾರ್ (7) ಮತ್ತು ಅರುಣ್ (8) ಎಂದು ಗುರುತಿಸಲಾಗಿದೆ.
ಹಳ್ಳಿಯಲ್ಲಿ ಸೋಮವಾರ ರಾತ್ರಿ ಮಳೆ ಬೀಳಲಿಲ್ಲ. ಆದರೆ ಭಾನುವಾರ ಸುರಿದಿದ್ದ ಜೋರು ಮಳೆಯಿಂದ ನರಸಿಂಹ ಮೂರ್ತಿ ಮನೆ ಸಾಕಷ್ಟು ಶಿಥಿಲಗೊಂಡಿತ್ತು. ಮಂಗಳವಾರ ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಬೀಸಿದ ಗಾಳಿಯಿಂದ ಗೋಡೆ ಕುಸಿದಿದೆ. ಹಿಂದಿನ ದಿನ ರಾತ್ರಿ 9 ಗಂಟೆ ಸುಮಾರಿಗೆ ಮಕ್ಕಳೊಟ್ಟಿಗೆ ಕೂತು ನರಸಿಂಹಮೂರ್ತಿ ಮತ್ತು ಆತನ ಹೆಂಡತಿ ನಗುನಗುತ್ತಾ ಊಟ ಮಾಡಿದ್ದನ್ನು ಕಂಡಿದ್ದವರು ಇಡೀ ಕುಟುಂಬದ ಸಾವನ್ನು ಜೀರ್ಣಿಸಿಕೊಳ್ಳಲಾರದೆ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.
ಗೋಡೆಯ ಅವಶೇಷಗಳಡಿ ಸಿಕ್ಕಿದ್ದ ಹೆಣಗಳನ್ನು ತೆಗೆಯಲು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಆಗಮಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...