ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ತೆಂಗು ನಾಶ ಮಾಡಿದಅಧಿಕಪ್ರಸಂಗಿ ಕೃಷಿ ಸಚಿವರಿಂದ ಮತ್ತೆ ಅಪರಾಧ’

By Staff
|
Google Oneindia Kannada News

ಬೆಂಗಳೂರು : ‘ಬಿಟಿ’ ಮುಸುಕಿನ ಜೋಳದಿಂದಾಗಿ ಅಮೆರಿಕಾದಲ್ಲಿ ಹಂದಿಗಳ ಸಂತಾನ ಶಕ್ತಿ ಹರಣವಾಗಿರುವುದು ವರದಿಯಾಗಿದೆ. ಭಾರತದ ರಾಜಕಾರಣಿಗಳಿಗೆ ಹಾಗೂ ವಿಜ್ಞಾನಿಗಳಿಗೆ ಇದನ್ನೇ ಆಹಾರವಾಗಿ ಒದಗಿಸುವುದು ಸೂಕ್ತವಾಗಿದೆ.

- ರಾಜ್ಯ ರೈತಸಂಘದ ಅಧ್ಯಕ್ಷ ಪ್ರೊ.ಎಂ.ಡಿ.ನಂಜುಂಡಸ್ವಾಮಿ ‘ಬಿಟಿ’ ಕೃಷ್ಯುತ್ಪನ್ನಗಳ ಕುರಿತು ವಕಾಲತ್ತು ವಹಿಸುತ್ತಿರುವ ರಾಜಕಾರಣಿ/ವಿಜ್ಞಾನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಟಿ ಹತ್ತಿ’ ಕುರಿತು ರೈತರನ್ನು ದಿಕ್ಕು ತಪ್ಪಿಸುತ್ತಿರುವ ಕೃಷಿ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಹಿಗ್ಗಾಮುಗ್ಗ ಟೀಕಿಸಿದರು.

ತೆಂಗು ಬೆಳೆಯ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ತಿಳಿ ಹೇಳಿದ್ದರೂ, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ರಾಸಾಯನಿಕ ಕಂಪನಿಗಳ ಆಮಿಷಕ್ಕೆ ಬಲಿಯಾದ ಜಯಚಂದ್ರ ರಾಜ್ಯದ ತೆಂಗು ಬೆಳೆಯನ್ನು ನಾಶ ಮಾಡಿದರು. ಈಗ ಅವರು ‘ಬಿಟಿ ಹತ್ತಿ’ ಮೂಲಕ ಇನ್ನೊಂದು ಅಪರಾಧ ಎಸಗಲು ಮುಂದಾಗಿದ್ದಾರೆ ಎಂದರು.

ಬಿಟಿ ಹತ್ತಿಯಿಂದ ಯಾವುದೇ ಅಪಾಯವಿಲ್ಲ ಎಂದು ಕೃಷಿ ಸಚಿವರು ಪದೇ ಪದೇ ಹೇಳಿಕೆ ಕೊಡುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದು ಅಧಿಕ ಪ್ರಸಂಗತನ. ಪ್ರಾಣಿಗಳ ಮೆದುಳು, ನಿರ್ನಾಳ ಗ್ರಂಥಿಗಳು ಹಾಗೂ ಸಂತಾನ ಶಕ್ತಿಯ ಮೇಲೆ ಉಂಟಾಗಿರುವ ಅಡ್ಡ ಪರಿಣಾಮಗಳ ಬಗ್ಗೆ ವಿಶ್ವದ ವಿವಿಧ ಭಾಗಗಳಲ್ಲಿ ನಡೆದಿರುವ ಸಂಶೋಧನೆಗಳನ್ನು ಅಧ್ಯಯನ ಮಾಡಿ ಮಾತನಾಡಬೇಕೆ ಹೊರತು, ಯಾವ ಅರಿವೂ ಇಲ್ಲದೆ ಅಧಿಕ ಪ್ರಸಂಗದಲ್ಲಿ ತೊಡಗಬಾರದು ಎಂದು ನಂಜುಂಡಸ್ವಾಮಿ ಖಾರವಾಗಿ ನುಡಿದರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X