ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡಿಕೆ ಕೃಷಿಕರ ಕೈ ಬಿಟ್ಟ ರಾಜ್ಯ ಸರ್ಕಾರ; ರಕ್ಷಣೆಗೆ ಮುಂದಾದ ಕೇಂದ್ರ
ಮಂಗಳೂರು : ಈ ಮುನ್ನ ಅಡಿಕೆಗೆ ಬೆಂಬಲ ಬೆಲೆ ನೀಡುವುದಾಗಿ ಪ್ರಕಟಿಸಿ, ಈಗ ಬೆಂಬಲ ಬೆಲೆ ನೀಡುವುದು ಅವಾಸ್ತವ ಎಂದು ರಾಜ್ಯ ಸರ್ಕಾರ ಪ್ಲೇಟು ಬದಲಾಯಿಸುತ್ತಿರುವಂತೆಯೇ, ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸುತ್ತಿರುವುದಾಗಿ ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ಧನಂಜಯ ಕುಮಾರ್ ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದ್ದು , ಅಡಿಕೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲು ಜುಲೈ 25 ರೊಳಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಧನಂಜಯ ಕುಮಾರ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಕಳೆದ
ಮೂರು
ವರ್ಷಗಳಲ್ಲಿ
ರಾಜ್ಯದಲ್ಲಿ
ಉತ್ಪಾದನೆಯಾದ
ಅಡಿಕೆಯ
ವಿವರ
ನೀಡುವಂತೆ
ರಾಜ್ಯ
ಸರ್ಕಾರವನ್ನು
ಕೇಂದ್ರ
ಸರ್ಕಾರ
ಕೋರಿದೆ.
ಅಂತೆಯೇ
2002-03
ನೇ
ಇಸವಿಯಲ್ಲಿ
ನಿರೀಕ್ಷಿತ
ಅಡಿಕೆ
ಉತ್ಪನ್ನದ
ಪ್ರಮಾಣವನ್ನು
ತಿಳಿಸುವಂತೆಯೂ
ಕೋರಲಾಗಿದೆ
ಎಂದು
ಸಚಿವರು
ಹೇಳಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Tuesday, June 4, 2002, 5:30 [IST]