‘ರಾಜ್ ಬಿಡುಗಡೆಗೆ ಹತ್ತು ಕೋಟಿ ರು. ಕೊಡಲಾಗಿದೆ’ - ಥೇವರಂ
ಧರ್ಮಪುರಿ : ರಾಜ್ಕುಮಾರ್ ಬಿಡುಗಡೆಗಾಗಿ 10 ಕೋಟಿ ರುಪಾಯಿ ಹಣ ಕೈಬಿಟ್ಟಿದೆ ಎಂದು ಎಸ್ಟಿಎಫ್ ಮುಖ್ಯಸ್ಥ ವಾಲ್ಟರ್ ಥೇವರಂ ಹೇಳಿದ್ದಾರೆ.
ಎಸ್ಟಿಎಫ್ ಪಡೆ ಈವರೆಗೆ ಏನು ಮಾಡಿದೆ ಎಂಬುದನ್ನು ಥೇವರಂ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು. ವೀರಪ್ಪನ್ ಜಂಘಾಬಲ ಈಗ ಉಡುಗಿದೆ. 7 ವರ್ಷಗಳ ಹಿಂದೆ ಆತನ ಪಾಳಯದಲ್ಲಿ 180 ಸದಸ್ಯರಿದ್ದರು. ಇವತ್ತು ಈ ವೀರಪ್ಪನ್ ಸೇರಿದಂತೆ ಆತನ ಗ್ಯಾಂಗ್ನಲ್ಲಿರುವುದು ಮೂವರು ಮಾತ್ರ. ಎಸ್ಟಿಎಫ್ ಏನು ಕಿಸಿದಿದೆ ಎಂಬುದಕ್ಕೆ ಇದೇ ಸಾಕ್ಷಿ. ಇನ್ನು ಕೆಲವೇ ದಿನಗಳಲ್ಲಿ ವೀರಪ್ಪನ್ ಸೆರೆಯಾಳಾಗುವುದು ಗ್ಯಾರಂಟಿ ಎಂದರು. ನಕ್ಕೀರನ್ ವರದಿಗಾರ ಶಿವಸುಬ್ರಮಣ್ಯಂ ಮತ್ತು ಕೊಳತ್ತೂರು ಮಣಿ ಬಂಧನವನ್ನು ಸಮರ್ಥಿಸಿಕೊಂಡ ದೇವಾರಂ, ಅವರ ವಿರುದ್ಧ ಪ್ರಕರಣಗಳನ್ನು ಸುಖಾ ಸುಮ್ಮನೆ ಹೇರಲಾಗಿದೆ ಎಂಬ ಆರೋಪವನ್ನು ಅಲ್ಲಗಳೆದರು.
ಶನಿವಾರವಷ್ಟೇ ವೀರಪ್ಪನ್ನ ಇಬ್ಬರು ಸಹಚರರನ್ನು ಬಂಧಿಸಲಾಗಿದ್ದು, ಅವರಿಂದ 2 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದೇವೆ. ಎಸ್ಟಿಎಫ್ ಶೋಷಣೆ ಕುರಿತು ಜಸ್ಟಿಸ್ ಸದಾಶಿವ ಆಯೋಗ ನಡೆಸುತ್ತಿರುವ ವಿಚಾರಣೆಯಿಂದ ನಮ್ಮ ಕಾರ್ಯಾಚರಣೆಗೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ. ವೀರಪ್ಪನ್ ಶಿಕಾರಿಯ ದಿನ ಹತ್ತಿರಾಗಿದೆ ಎಂದು ಥೇವರಂ ಆತ್ಮವಿಶ್ವಾಸದಿಂದ ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ವೀರಪ್ಪನ್
ಶಿಕಾರಿ