ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಡೀಸಲ್ ಬೆಲೆ ಏರಿದರೆ, ಮರು ದಿನವೇ ಬಸ್ ಪ್ರಯಾಣ ದರ ತುಟ್ಟಿ’
ಬೆಂಗಳೂರು : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿದ ಮರು ದಿನವೇ ಬಸ್ ಪ್ರಯಾಣ ದರಗಳನ್ನೂ ಏರಿಸಬೇಕು. ಇದಕ್ಕೆ ಕೇಂದ್ರ ಅನುಮತಿ ಕೊಟ್ಟಿದೆ. ಜನ ಸಹಕರಿಸಬೇಕು ಎಂದು ಸಾರಿಗೆ ಸಚಿವ ಸಗೀರ್ ಅಹಮದ್ ಕೇಳಿಕೊಂಡಿದ್ದಾರೆ.
ಪ್ರಯಾಣಿಕರಿಗೆ ಅನುಕಾಲ ಮಾಡಿಕೊಡುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಹಾಗಾಗಿ ಡೀಸೆಲ್ ದರದಲ್ಲಿ ಏರಿಕೆಯಾದೊಡನೆ ಬಸ್ ಪ್ರಯಾಣ ದರವನ್ನೂ ಏರಿಸುವುದು ಅನಿವಾರ್ಯ. ಹೊಸ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕೆ ಇದು ಅಗತ್ಯ ಎಂದರು.
ಸಗೀರ್ ಹೇಳಿದಂತೆ ಪ್ರಸಕ್ತ ವರ್ಷ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಡಲಿರುವ ಹೆಜ್ಜೆಗಳು...
- ಮುಂದಿನ ಮೂರು ತಿಂಗಳಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ 3 ಸಾವಿರ ಹುದ್ದೆಗಳ ಭರ್ತಿ. ಈ ಕುರಿತ ಪ್ರಸ್ತಾವನೆ ಸರ್ಕಾರದ ಮುಂದಿದೆ.
- 200 ಲೋ ಫ್ಲೋರ್ ಬಸ್ಗಳೂ ಸೇರಿದಂತೆ 300 ಹೊಸ ಬಸ್ಗಳ ಸಂಚಾರ.
- ಬೆಂಗಳೂರಿನ 24 ಮಾರ್ಗಗಳಲ್ಲಿ ಸದ್ಯದಲ್ಲೇ 20 ಫೀಡರ್ ಬಸ್ಗಳ ಸಂಚಾರ.
- ಬೆಂಗಳೂರು ಮೆಟ್ರೋ ಬಸ್ ಯೋಜನೆಯ ಪ್ರಸ್ತಾವನೆ ಸ್ವೀಡನ್ ಸರ್ಕಾರದ ಮುಂದಿದೆ.
- 1 ಕೋಟಿ ರುಪಾಯಿ ವೆಚ್ಚದಲ್ಲಿ ಬನಶಂಕರಿ ಡಿಪೋ ನಿರ್ಮಾಣ ಪೂರ್ಣವಾಗಿದ್ದು, ಶೀಘ್ರದಲ್ಲೇ ಅದರ ಉದ್ಘಾಟನೆಯಾಗಲಿದೆ.
- ಬೆಂಗಳೂರಿನ ಪ್ರಯಾಣಿಕರಿಗೆ ಬಸ್ ವೇಳಾಪಟ್ಟಿಯ ಜೊತೆಗೆ ಕೆಲವು ಮೂಲ ಮಾಹಿತಗಳನ್ನೂ ಎಲ್ಲಾ ಬಸ್ ನಿಲುಗಡೆ ಸ್ಥಳಗಳಲ್ಲಿ ಬೋರ್ಡ್ಗಳ ಮೂಲಕ ನೀಡಲಾಗುವುದು.
- ಶಿವಾಜಿನಗರದಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿರುವ ತಂತಾನೇ ಟಿಕೆಟ್ ಕೊಡುವ ಯಂತ್ರಗಳನ್ನು ರಾಜ್ಯಾದ್ಯಂತ ಸ್ಥಾಪಿಸಲಾಗುವುದು.
- ಜನಪ್ರಿಯ ವಾಹಿನಿ ಹಾಗೂ ಪುಷ್ಪಕ್ ಬಸ್ ದರ ತುಟ್ಟಿಯೆಂಬ ಕಾರಣಕ್ಕೆ ಹತ್ತುವ ಪ್ರಯಾಣಿಕರು ಕಡಿಮೆ. ಆದ ಕಾರಣ, ಮಧ್ಯಾಹ್ನ 12.30 ಹಾಗೂ ಸಂಜೆ 6ರಿಂದ 8 ಗಂಟೆಯ ಅವಧಿಯಲ್ಲಿ ಈ ಬಸ್ ದರಗಳಲ್ಲಿ ರಿಯಾಯಿತಿ ನೀಡುವ ಕುರಿತು ಯೋಚಿಸಲಾಗುತ್ತಿದೆ.
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, June 3, 2002, 5:30 [IST]