ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ ಯಾತ್ರಿಕರ ಸುರಕ್ಷೆಗಾಗಿ ವಿಶೇಷ ಭದ್ರತಾ ಕವಚ

By Staff
|
Google Oneindia Kannada News

ಲೇಹ್‌: ಅಮರನಾಥ ಯಾತ್ರಿಕರ ಸುರಕ್ಷೆಗಾಗಿ ಈ ವರ್ಷ ವಿಶೇಷ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ. ಯಾತ್ರಿಕರ ಸುರಕ್ಷತೆಗಾಗಿ ಮಾಡಲಾಗಿರುವ ಭದ್ರತಾ ಏರ್ಪಾಡುಗಳನ್ನು ಪರಿಶೀಲಿಸಲು ಜಮ್ಮು ಕಾಶ್ಮೀರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ವಿಶೇಷ ಏರ್ಪಾಡುಗಳ ಬಗೆಗೆ ಚರ್ಚಿಸಲಾಯಿತು.

ಕಳೆದ ವರ್ಷ ಹಲವು ಮಂದಿ ಅಮರನಾಥ ಯಾತ್ರಿಕರು ಭಯೋತ್ಪಾದಕರ ದಾಳಿಗೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಈ ವರ್ಷ ವಿಭಿನ್ನ ರೀತಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಸಭೆಯ ನಂತರ ಮುಖ್ಯಮಂತ್ರಿ ಅಬ್ದುಲ್ಲಾ ಭಾನುವಾರ ತಿಳಿಸಿದರು.

ರಾಜ್ಯ ಪೊಲೀಸ್‌ ಬಲ, ಅರೆಸೇನಾ ಪಡೆ ಮತ್ತು ಸೇನಾ ಯೋಧರನ್ನು ಒಳಗೊಂಡ ವಿಶೇಷ ಭದ್ರತಾ ಕವಚ ನಿರ್ಮಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನತೆ ನೆಲೆಸಿರುವ ಹಿನ್ನೆಲೆಯಲ್ಲಿ ಈ ವರ್ಷ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ಸೇನೆಯ 15ನೇ ದಳದ ಕಮಾಂಡರ್‌ ಜನರಲ್‌ ಪಟನ್‌ಕರ್‌ಗೆ ವಹಿಸಿಕೊಡಲಾಗಿದೆ. ಯಾತ್ರೆಯ ಅವಧಿಯಲ್ಲಿ ಯಾತ್ರಿಕರ ಸುರಕ್ಷತೆಯ ಜವಾಬ್ದಾರಿ ಅವರದು ಎಂದು ಅಬ್ದುಲ್ಲಾ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X