ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಮಾನವೀಯ ಮೌಲ್ಯಗಳಿಲ್ಲದ ವೈದ್ಯರು ರಾಕ್ಷಸರಿಗೆ ಸಮಾನರಲ್ಲವೇ..?’

By Staff
|
Google Oneindia Kannada News

ಬೆಂಗಳೂರು : ತಾಂತ್ರಿಕತೆ, ಹೈಟೆಕ್‌ ಸೌಲಭ್ಯಗಳು ವೈದ್ಯಕೀಯ ಕ್ಷೇತ್ರದಲ್ಲಿ ಕಾಲಿಟ್ಟಿರುವುದು ನಿಜ. ಆದರೆ ವೈದ್ಯರು ಮಾವೀಯತೆಯನ್ನು ಮರೆತು ಬಡ ರೋಗಿಗಳ ಜೀವನದ ಮೇಲೆ ಸವಾರಿ ಮಾಡುವುದು ತರವೇ...? ಈ ವಿಷಯವನ್ನು ಎಲ್ಲ ವೈದ್ಯರು ಅರಿತುಕೊಂಡು ಕೆಲಸ ಮಾಡಬೇಕು ಎಂದು ಸಾಹಿತಿ ಡಾ. ಯು.ಆರ್‌. ಅನಂತಮೂರ್ತಿ ವೈದ್ಯಕೀಯ ಕ್ಷೇತ್ರಕ್ಕೆ ಕರೆ ಕೊಟ್ಟಿದ್ದಾರೆ.

ಅವರು ಶನಿವಾರ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾಲಯದ ಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾವಹಿಸಿ ಮಾತನಾಡುತ್ತಿದ್ದರು. ಅನವಶ್ಯಕ ಔಷಧಿಗಳ ನೀಡಿಕೆ, ಅನವಶ್ಯಕ ತಪಾಸಣೆಗಳಿಂದ ಬಡ ರೋಗಿಗಳ ಮೇಲೆ ಆರ್ಥಿಕ ಹೊರೆ ಹೊರಿಸುವುದು ಅನೈತಿಕ ವರ್ತನೆ. ಮಾನವೀಯ ಸ್ಪರ್ಶವೇ ಇಲ್ಲದ ವೈದ್ಯರು ಮತ್ತು ವಿಜ್ಞಾನಿಗಳು ರಾಕ್ಷಸರಿಗೆ ಸಮಾನ. ರೋಗಿಗಳಿಗೂ ಅಂತಹ ವೈದ್ಯರ ಮೇಲೆ ನಂಬಿಕೆಯಾಗಲೀ, ಉತ್ತಮ ಭಾವನೆಯಾಗಲೀ ಇರುವುದಿಲ್ಲ ಎಂದು ಅವರು ಹೇಳಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕತೆ ಕಾಲಿಟ್ಟಿದ್ದರೂ, ಹೈಟೆಕ್‌ ಆಸ್ಪತ್ರೆಗಳಲ್ಲಿಯೇ ಅಂಬ್ಯುಲೆನ್ಸ್‌ನಂತಹ ಕನಿಷ್ಠ ಸೌಲಭ್ಯಗಳು ಇರುವುದಿಲ್ಲ ಎಂದು ವಿಷಾದಿಸಿದ ಅನಂತಮೂರ್ತಿ ಮಾನವೀಯತೆಯನ್ನು ವೈದ್ಯಕೀಯ ರಂಗ ಎಷ್ಟು ಬೇಗ ಅರ್ಥ ಮಾಡಿಕೊಳ್ಳುತ್ತದೋ ಅಷ್ಟು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X