ಘರ್ಷಣೆ : ಬೆಂಗಳೂರಿನ ತಿಲಕನಗರ, ಮೈಕೋಲೇಔಟ್ನಲ್ಲಿ ಕರ್ಫ್ಯೂ
ಬೆಂಗಳೂರು : ತಿಲಕ ನಗರ ಹಾಗೂ ಮೈಕೋ ಲೇಔಟ್ನ ಕೆಲವು ಭಾಗಗಳಲ್ಲಿ ಭುಗಿಲೆದ್ದ ಗುಂಪು ಘರ್ಷಣೆಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ.
ಶನಿವಾರ ಬೆಳಗ್ಗೆ ದುಷ್ಕರ್ಮಿಗಳು ಕಾರೊಂದಕ್ಕೆ ಬೆಂಕಿ ಹಚ್ಚಿದ್ದು, ಈ ಪ್ರದೇಶಗಳಲ್ಲಿ ಪರಿಸ್ಥಿತಿ ಸುಧಾರಿಸುವವರೆಗೂ ಕರ್ಫ್ಯೂ ಮುಂದುವರಿಸಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ಶನಿವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಧಾರ್ಮಿಕ ಮೆರವಣಿಗೆಯಾಂದಕ್ಕೆ ಇನ್ನೊಂದು ಕೋಮಿನ ಕಿಡಿಗೇಡಿಗಳು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಹಿಂಸಾಚಾರ ನಡೆದಿತ್ತು .
ಹಿಂಸಾಚಾರದಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದಾರೆ. ಒಬ್ಬನಿಗೆ ಇರಿತದಿಂದ ಗಂಭೀರ ಗಾಯಗಳಾಗಿವೆ. ಹಿಂಸಾಚಾರದ ಸಂಬಂಧವಾಗಿ ಈವರೆಗೂ 60 ಮಂದಿಯನ್ನು ಬಂಧಿಸಲಾಗಿದೆ ಎಂದು ಸಾಂಗ್ಲಿಯಾನ ತಿಳಿಸಿದರು.
ಮೀಸಲು
ಪೊಲೀಸ್
ಪಡೆಯ
12
ಫ್ಲಟೂನ್ಗಳು
ಬಿಗು
ವಾತಾವರಣ
ಉಂಟಾಗಿರುವ
ಪ್ರದೇಶಗಳಲ್ಲಿ
ಶಾಂತಿ
ರಕ್ಷಣೆಯ
ಕಾರ್ಯದಲ್ಲಿ
ತೊಡಗಿವೆ.
ಸಾಂಗ್ಲಿಯಾನ
ಮಾತ್ರವಲ್ಲದೆ,
ರಾದಜ್ಯ
ಪೊಲೀಸ್
ಮಹಾ
ನಿರ್ದೇಶಕ
ವಿ.ವಿ.ಭಾಸ್ಕರ್
ಕೂಡ
ಶಾಂತಿ
ಪಾಲನೆಯ
ನಿರ್ವಹಣೆಯ
ನೇತೃತ್ವ
ವಹಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...