ಮುತ್ತಪ್ಪ ರೈ ಶರಣಾಗತನಲ್ಲ , ಬಂಧಿ : ಸಾಂಗ್ಲಿಯಾನ ಸ್ಪಷ್ಟನೆ
ಬೆಂಗಳೂರು : ಪಾಪಿಗಳ ಲೋಕದ ಕುಖ್ಯಾತ ಮುತ್ತಪ್ಪ ರೈ ಶರಣಾಗತನಾಗಿಲ್ಲ, ಆತನನ್ನು ದುಬೈನಲ್ಲಿ ಬಂಧಿಸಲಾಯಿತು ಎಂದು ನಗರ ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಸ್ಪಷ್ಟಪಡಿಸಿದ್ದಾರೆ.
ಕೆಲವು ಮಾಧ್ಯಮಗಳು ಮುತ್ತಪ್ಪ ರೈ ಶರಣಾಗತನಾಗಿದ್ದಾನೆ ಎಂದು ಪ್ರಕಟಿಸಿರುವುದು ಸರಿಯಲ್ಲ. ಅಕ್ರಮ ಪಾಸ್ಪೋರ್ಟ್ ಹೊಂದಿರುವ ಕಾರಣಕ್ಕಾಗಿ ದುಬೈನ ವಲಸೆ ಪ್ರಾಧಿಕಾರದ ಅಧಿಕಾರಿಗಳು ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುತ್ತಪ್ಪ ರೈನನ್ನು ಆತನ ಮನೆಯಲ್ಲೇ ಬಂಧಿಸಿರುವುದು ಸತ್ಯ ಎಂದರು.
ದಾವೂದ್ ಇಬ್ರಾಹಿಂ ಜೊತೆ ಸಂಬಂಧ ಇಟ್ಟುಕೊಂಡಿರುವ ಮತ್ತು ಗುಜರಾತ್ ಹಿಂಸಾಚಾರದಲ್ಲಿ ತನ್ನ ಕೈವಾಡ ಇರುವುದನ್ನು ಮುತ್ತಪ್ಪ ಒಪ್ಪಿಕೊಂಡಿರುವ ವರದಿಗಳಿವೆ. ಇದು ನಿಜವೇ ಎಂದು ಕೇಳಿದಾಗ ಉತ್ತರಿಸಲು ಸಾಂಗ್ಲಿಯಾನ ನಿರಾಕರಿಸಿದರು. ಸಿಬಿಐ ಹಾಗೂ ಪೊಲೀಸರು ಗುರುವಾರ ನಡೆಸಿದ ವಿಚಾರಣೆಯಲ್ಲಿ ಹೊರ ಬಿದ್ದಿರುವ ವಿಷಯಗಳನ್ನು ತಿಳಿದುಕೊಂಡು, ಅದು ಸರಿಯೋ ತಪ್ಪೋ ಎಂಬುದನ್ನು ಪರಿಶೀಲಿಸಿದ ನಂತರವೇ ಈ ಪ್ರಶ್ನೆಗೆ ಖಚಿತ ಉತ್ತರ ಸಿಗುವುದು ಎಂದು ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...