ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗೆ ಬಂದ ಮುತ್ತಪ್ಪ ರೈ ! ಸಿಬಿಐ ಅಧಿಕಾರಿಗಳಿಂದ ವಿಚಾರಣೆ

By Staff
|
Google Oneindia Kannada News

ಬೆಂಗಳೂರು : ದುಬೈ ಪೊಲೀಸರು ಬಂಧಿಸಿದ್ದ ಪಾಪಿಗಳ ಲೋಕದ ಕುಖ್ಯಾತ ಮುತ್ತಪ್ಪ ರೈನನ್ನು ಬೆಂಗಳೂರು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದು , ಗುರುವಾರ ಬೆಳಗ್ಗೆ ಆತನನ್ನು ಬೆಂಗಳೂರಿಗೆ ಕರೆ ತರಲಾಗಿದೆ.

ಭೂಗತ ಲೋಕದ ಡಾನ್‌ ದಾವೂದ್‌ ಇಬ್ರಾಹಿಂ ಸಹಚರ ಎನ್ನಲಾದ ಮುತ್ತಪ್ಪ ರೈ- ಕೊಲೆ, ಅಪಹರಣ ಮುಂತಾದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ವಿವಿಧ ಪ್ರಕರಣಗಳ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿನ ಸಿಬಿಐ ಕಚೇರಿಯಲ್ಲಿ ಮುತ್ತಪ್ಪ ರೈನನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೆ ಗುರಿ ಪಡಿಸಿದ್ದು , ಯಾವುದೇ ಕ್ಷಣದಲ್ಲಿ ಆತನನ್ನು ಪೊಲೀಸರಿಗೆ ಹಸ್ತಾಂತರಿಸಬಹುದು ಎಂದು ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಪರಾಧ ವಿಭಾಗದ ಡಿಸಿಪಿ ರವೀಂದ್ರ ಪ್ರಸಾದ್‌ ನೇತೃತ್ವದ ಪೊಲೀಸ್‌ ಅಧಿಕಾರಿಗಳ ತಂಡ ಮುತ್ತಪ್ಪನನ್ನು ದೆಹಲಿಯಿಂದ ಬೆಂಗಳೂರಿಗೆ ಕರೆ ತಂದಿದೆ. ದುಬೈನಲ್ಲಿ ಇದ್ದುಕೊಂಡೇ ಮುತ್ತಪ್ಪ ರೈ ಬೆಂಗಳೂರಿನ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ ಎನ್ನಲಾಗಿದ್ದು , ಪ್ರಸ್ತುತ ಆತನ ಆಗಮನ ಬೆಂಗಳೂರು ಪಾಪಿಗಳ ಲೋಕದ ಮೇಲೆ ಯಾವ ರೀತಿಯ ಪರಿಣಾಮ ಉಂಟು ಮಾಡುತ್ತದೆ ಎನ್ನುವ ವಿಷಯ ಕುತೂಹಲ ಕೆರಳಿಸಿದೆ.

ಹೊಸ ಬದುಕು : ತನ್ನ ಈವರೆಗಿನ ಬದುಕಿನ ಬಗ್ಗೆ ಬೇಸತ್ತಿರುವ ಮುತ್ತಪ್ಪ ರೈ ಹೊಸ ಜೀವನ ಆರಂಭಿಸಲು ಉತ್ಸುಕನಾಗಿದ್ದಾನೆ. ಕಾನೂನು ಸಮರದ ನಂತರ ಮುತ್ತಪ್ಪ ರೈ ಹೊಸ ಬಾಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದಾನೆ ಎನ್ನಲಾಗಿದೆ. ಬೆಂಗಳೂರು ನಗರ ಕಮೀಷನರ್‌ ಸಾಂಗ್ಲಿಯಾನ ಅವರ ನಿಜಾಯಿತಿ ಬಗ್ಗೆ ಅಪಾರ ವಿಶ್ವಾಸ ವ್ಯಕ್ತಪಡಿಸಿರುವ ಮುತ್ತಪ್ಪ ರೈ, ತನ್ನ ಹೊಸ ಬಾಳಿಗೆ ಪೊಲೀಸರು ಸಹಕರಿಸುತ್ತಾರೆಂದು ನಂಬಿದ್ದಾನೆ ಎನ್ನಲಾಗಿದೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X