ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೋಮುವಾದದ ವಿರುದ್ಧ ಕರ್ನಾಟಕ ಜಾಥಾಗೆ ಕೈಕೊಟ್ಟವರು...
ಬೆಂಗಳೂರು : ಕುಲದೀಪ್ ನಯ್ಯರ್ ಇರಲಿಲ್ಲ. ನಟ ದಿಲೀಪ್ ಕುಮಾರೂ ಬಂದಿರಲಿಲ್ಲ. ಸಿದ್ಧಗಂಗೆ ಮಠದ ಶಿವಕುಮಾರ ಸ್ವಾಮಿಗಳೂ ಕೈಕೊಟ್ಟರು. ಸೋಮವಾರ ನಡೆದ ಕೋಮುವಾದದ ವಿರುದ್ಧ ಕರ್ನಾಟಕ ಎಂಬ ಬೃಹತ್ ರ್ಯಾಲಿಯಲ್ಲಿ ಗೈರುಹಾಜರಾದವರ ಸಂಖ್ಯೆ ದೊಡ್ಡದಿದೆ.
ಜನಮತದ ಶ್ರೀಧರ್ ಈ ಹಿಂದೆ ಕೊಟ್ಟಿದ್ದ ಸುದ್ದಿ ಹೇಳಿಕೆ ಪ್ರಕಾರ ಈ ಜಾಥಾ ದೊಡ್ಡ ಸಂಚಲನೆ ಸೃಷ್ಟಿಸುವಂತಿರಬೇಕಿತ್ತು. ಆದರೆ 50ಕ್ಕೂ ಹೆಚ್ಚು ಸಂಘಟನೆಗಳ ಪೈಕಿ ಜಾಥಾಗೆ ಬಂದಿದ್ದು ನಲವತ್ತು ಚಿಲ್ಲರೆ. ನಿರೀಕ್ಷೆಯಂತೆ 30 ಸಾವಿರ ಜನ ಖಂಡಿತ ಇರಲಿಲ್ಲ. ರೈತ ಸಂಘದ ಪುಟ್ಟಣ್ಣಯ್ಯ, ಪ್ರೋಫೆಸರುಗಳಾದ ಚಂಪಾ, ಲೋಹಿತಾಶ್ವ, ಹಸನ್ ಮನ್ಸೂರ್ ಜಾಥಾದಲ್ಲಿ ಕಂಡ ಪ್ರಮುಖರು.
ಅಂದುಕೊಂಡಂತೆ ನಡೆದದ್ದು- ಆದಿಚುಂಚನಗಿರಿಯ ಬಾಲಗಂಗಾಧರ ನಾಥ ಸ್ವಾಮೀಜಿ ಜಾಥಾಗೆ ಚಾಲನೆ ಕೊಟ್ಟಿದ್ದು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Monday, May 27, 2002, 5:30 [IST]