ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸ್ವಾಮಿ ಮುಖ್ಯಮಂತ್ರಿಗಳೇ ಬಹಿರಂಗ ಚರ್ಚೆಗೆ ಬರ್ತೀರಾ..’

By Staff
|
Google Oneindia Kannada News

ಬೆಂಗಳೂರು : ‘ಬೊಕ್ಕಸ ಬರಿದಾಗಿಲ್ಲ . ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದೆ ಎಂದು ಹೋದಲ್ಲೆಲ್ಲ ಬೊಗಳೆ ಬಿಡ್ತೀರಲ್ಲ . ಹಾಗಿದ್ದರೆ ಚರ್ಚೆಗೆ ಬನ್ನಿ , ನಿಜಸ್ಥಿತಿ ಜನತೆಗೆ ತಿಳಿಯಲಿ.’

- ಇದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ಜಾತ್ಯತೀತ ಜನತಾದಳದ ಮೈಸೂರು ನಗರಾಧ್ಯಕ್ಷ ಅನಂತ ಅವರ ಸವಾಲು.

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಜನತೆಗೆ ಮರೆ ಮಾಚುತ್ತಿದೆ. ಆ ಕಾರಣದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಎರಡೂವರೆ ವರ್ಷಗಳ ಅವಧಿಯ ಕಾಂಗ್ರೆಸ್‌ ಸರ್ಕಾರದ ಸಾಧನೆಯ ಬಗ್ಗೆ ಕೃಷ್ಣ ಅವರು ಬಹಿರಂಗ ಚರ್ಚೆಗೆ ಮುಂದಾಗಬೇಕೆನ್ನುವುದು ಅನಂತು ಅವರ ಆಗ್ರಹ.

ಅಂದಹಾಗೆ, ಕೃಷ್ಣ ಅವರು ಬಹಿರಂಗ ಚರ್ಚೆಗೆ ಮುಂದಾದಲ್ಲಿ , ಅವರೊಂದಿಗೆ ಅನಂತು ಚರ್ಚಿಸುವುದಿಲ್ಲ . ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅನಂತು ಅವರ ಪರವಾಗಿ ಪಾಟೀ ಸವಾಲು ಮಂಡಿಸಲಿದ್ದಾರೆ.

ಕೃಷ್ಣ ಹಾಗೂ ಸಿದ್ಧರಾಮಯ್ಯ ಅವರ ಚರ್ಚೆಗೆ ಅನಂತು ದಿನಾಂಕ ಹಾಗೂ ಸ್ಥಳವನ್ನೂ ಗೊತ್ತು ಪಡಿಸಿದ್ದಾರೆ. ಮೇ 27 ರಂದು, ಸಂಜೆ 4 ಗಂಟೆಗೆ ಮೈಸೂರಿನ ಪುರಭವನದಲ್ಲಿ ಚರ್ಚೆ.
ಮುಖ್ಯಮಂತ್ರಿಗಳೇ ಬರ್ತೀರಾ?
(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X