‘ಸ್ವಾಮಿ ಮುಖ್ಯಮಂತ್ರಿಗಳೇ ಬಹಿರಂಗ ಚರ್ಚೆಗೆ ಬರ್ತೀರಾ..’
ಬೆಂಗಳೂರು : ‘ಬೊಕ್ಕಸ ಬರಿದಾಗಿಲ್ಲ . ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದೆ ಎಂದು ಹೋದಲ್ಲೆಲ್ಲ ಬೊಗಳೆ ಬಿಡ್ತೀರಲ್ಲ . ಹಾಗಿದ್ದರೆ ಚರ್ಚೆಗೆ ಬನ್ನಿ , ನಿಜಸ್ಥಿತಿ ಜನತೆಗೆ ತಿಳಿಯಲಿ.’
- ಇದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಜಾತ್ಯತೀತ ಜನತಾದಳದ ಮೈಸೂರು ನಗರಾಧ್ಯಕ್ಷ ಅನಂತ ಅವರ ಸವಾಲು.
ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಜನತೆಗೆ ಮರೆ ಮಾಚುತ್ತಿದೆ. ಆ ಕಾರಣದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಎರಡೂವರೆ ವರ್ಷಗಳ ಅವಧಿಯ ಕಾಂಗ್ರೆಸ್ ಸರ್ಕಾರದ ಸಾಧನೆಯ ಬಗ್ಗೆ ಕೃಷ್ಣ ಅವರು ಬಹಿರಂಗ ಚರ್ಚೆಗೆ ಮುಂದಾಗಬೇಕೆನ್ನುವುದು ಅನಂತು ಅವರ ಆಗ್ರಹ.
ಅಂದಹಾಗೆ, ಕೃಷ್ಣ ಅವರು ಬಹಿರಂಗ ಚರ್ಚೆಗೆ ಮುಂದಾದಲ್ಲಿ , ಅವರೊಂದಿಗೆ ಅನಂತು ಚರ್ಚಿಸುವುದಿಲ್ಲ . ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅನಂತು ಅವರ ಪರವಾಗಿ ಪಾಟೀ ಸವಾಲು ಮಂಡಿಸಲಿದ್ದಾರೆ.
ಕೃಷ್ಣ
ಹಾಗೂ
ಸಿದ್ಧರಾಮಯ್ಯ
ಅವರ
ಚರ್ಚೆಗೆ
ಅನಂತು
ದಿನಾಂಕ
ಹಾಗೂ
ಸ್ಥಳವನ್ನೂ
ಗೊತ್ತು
ಪಡಿಸಿದ್ದಾರೆ.
ಮೇ
27
ರಂದು,
ಸಂಜೆ
4
ಗಂಟೆಗೆ
ಮೈಸೂರಿನ
ಪುರಭವನದಲ್ಲಿ
ಚರ್ಚೆ.
ಮುಖ್ಯಮಂತ್ರಿಗಳೇ
ಬರ್ತೀರಾ?
(ಇನ್ಫೋ
ವಾರ್ತೆ)
ಮುಖಪುಟ / ಕೃಷ್ಣಗಾರುಡಿ