ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಶಾಂತಿಪ್ರಿಯರು ; ಯುದ್ಧ ಹೇರಿದರೆ ಹೋರಾಡುವೆವು - ಪಾಕ್‌

By Staff
|
Google Oneindia Kannada News

ಇಸ್ಲಮಾಬಾದ್‌: ಸಂಯಮ ಕಳೆದುಕೊಳ್ಳಬೇಡಿ ಎಂದು ದೊಡ್ಡಣ್ಣ ಅಮೆರಿಕ, ಭಾರತ ಹಾಗೂ ಪಾಕಿಸ್ತಾನಗಳಿಗೆ ಇನ್ನೊಮ್ಮೆ ಕಿವಿ ಮಾತು ಹೇಳಿರುವ ಬೆನ್ನಿಗೇ- ಪಾಕಿಸ್ತಾನ ಯಾವುದೇ ದಾಳಿಯನ್ನು ಬಗ್ಗು ಬಡಿಯಲು ಸಿದ್ಧವಾಗಿದೆ ಎಂದು ಪಾಕ್‌ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ. ಆದರೆ ತನ್ನ ಮೇಲೆ ದಾಳಿ ನಡೆದಲ್ಲಿ ಅದು ಹೋರಾಟಕ್ಕೆ ಸಿದ್ಧವಾಗಿದೆ ಎಂದು ಅಜೀಜ್‌ ಅಹ್ಮದ್‌ ಖಾನ್‌ ಬುಧವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಭಾರತದ ಪ್ರಧಾನಿ ವಾಜಪೇಯಿ ತಮ್ಮ ಕಾಶ್ಮೀರ ಭೇಟಿಯಲ್ಲಿ ಪ್ರಸ್ತಾಪಿಸಿದ ಯುದ್ಧ ಬೆದರಿಕೆಗೆ ಅಹ್ಮದ್‌ ಖಾನ್‌ ಪ್ರತಿಕ್ರಿಯಿಸುತ್ತಿದ್ದರು.

ಉಪಖಂಡದಲ್ಲಿ ಶಾಂತಿ ನೆಲೆಸಬೇಕೆಂಬುದೇ ಪಾಕಿಸ್ತಾನದ ಆಶಯ. ಆದರೆ, ಪಾಕಿಸ್ತಾನದ ಮೇಲೆ ಯುದ್ಧ ಹೇರಲಾದಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪಾಕ್‌ ಸೇನೆ ಹಾಗೂ ನಾಗರಿಕರು ಸಿದ್ಧರಾಗಿದ್ದಾರೆ ಎಂದು ಅಜೀಜ್‌ ಅಹ್ಮದ್‌ ಖಾನ್‌ ಸ್ಪಷ್ಟಪಡಿಸಿದರು.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X