ಸಿಲಿಕಾನ್ವ್ಯಾಲಿ ಪ್ರಥಮ ಪ್ರಜೆಗೆ ಕೊನೆಗೂ ಇ-ಮೇಲ್ ವಿಳಾಸ ಬಂತು
ಬೆಂಗಳೂರು : ಬೆಂಗಳೂರು ಮಹಾನಗರದ ಮೇಯರ್ ಕೆ.ಚಂದ್ರಶೇಖರ್ ಕೊನೆಗೂ ಇ-ಮೇಲ್ ಜಾಲಕ್ಕೆ ಬಂದಿದ್ದಾರೆ.
ಬೆಂಗಳೂರು ಸಿಲಿಕಾನ್ ವ್ಯಾಲಿ ಎನ್ನುವ ಅಗ್ಗಳಿಕೆಗೆ ಪಾತ್ರವಾದರೂ, ಮಹಾನಗರದ ಮೇಯರ್ಗೆ ಮಾತ್ರ ಕಂಪ್ಯೂಟರ್ ಕಂಡರೆ ಅಷ್ಟಕ್ಕಷ್ಟೆ . ಆದರೆ, ಕಾಲಕ್ಕೆ ತಕ್ಕಂತೆ ಬದಲಾಗಲೇಬೇಕಾದ ಅನಿವಾರ್ಯತೆ ಹಾಗೂ ಒತ್ತಡಗಳನ್ನು ಮನಗಂಡ ಅವರು ಇ-ಮೇಲ್ ವಿಳಾಸ ಹೊಂದಿದ್ದಾರೆ. ಇನ್ನು ಮುಂದೆ ನಾಗರಿಕರು ಇ-ಮೇಲ್ ಮೂಲಕ ಮೇಯರ್ ಜೊತೆ ಕಷ್ಟ ಸುಖ ಹಂಚಿಕೊಳ್ಳಬಹುದು.
ಮೇಯರ್ ಮಾತ್ರವಲ್ಲ , ಮಹಾನಗರ ಪಾಲಿಕೆ ಆಯುಕ್ತ ಎಂ.ಆರ್.ಶ್ರೀನಿವಾಸ ಮೂರ್ತಿ ಅವರನ್ನೂ ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ. ಚಂದ್ರಶೇಖರ್ ಅವರ ಇ-ಮೇಲ್ : [email protected], ಪಾಲಿಕೆ ಆಯುಕ್ತ ಶ್ರೀನಿವಾಸಮೂರ್ತಿ ಅವರ ಇ-ಮೇಲ್ : [email protected]
ಇ- ಟಪಾಲ್.ಕಾಂನಲ್ಲಿ ಕನ್ನಡ ಫಾಂಟ್ ಸವಲತ್ತು ಇರುವುದರಿಂದ ಮೇಯರ್ ಹಾಗೂ ಆಯುಕ್ತರಿಗೆ ಕನ್ನಡಲ್ಲೂ ಇ-ಪತ್ರ ಬರೆಯಬಹುದು. ಮೇಯರ್ ಹಾಗೂ ಆಯುಕ್ತರ ಕಚೇರಿಗಳೀಗ ಕಂಪ್ಯೂಟರೀಕರಣ ಪ್ರಕ್ರಿಯೆಗೆ ಒಳಗಾಗಿದ್ದು , ಕಂಪ್ಯೂಟರೀಕರಣದ ಅಂಗವಾಗಿಯೇ ಮೇಯರ್ ಇ-ಮೇಲ್ ಜಾಲಕ್ಕೆ ಬಂದಿದ್ದಾರೆ.
ಮೇಯರ್
ಅವರೇನೋ
ವಿದ್ಯುನ್ಮಾನ
ಜಾಲಕ್ಕೆ
ಬಂದಾಯಿತು
;
ಕನ್ನಡ
ಮತ್ತು
ಸಂಸ್ಕೃತಿ
ಸಚಿವರು
ಹಾಗೂ
ಕನ್ನಡ
ಅಭಿವೃದ್ಧಿ
ಪ್ರಾಧಿಕಾರದ
ಬರಗೂರು
ಇ-ಜಾಲಕ್ಕೆ
ಬರುವುದು
ಯಾವಾಗ?
(ಇನ್ಫೋ
ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ