ರಾಷ್ಟ್ರಪತಿ ಸ್ಥಾನಕ್ಕೆ ಹೆಗಡೆ :ಬೆಂಬಲಕ್ಕೆ ವಿವಿಧ ಪಕ್ಷಗಳ ತಟ್ಟುತ್ತಿರುವ ಜೆಡಿ
ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ರಾಷ್ಟ್ರಪತಿ ಚುನಾವಣೆಯ ಸ್ಪರ್ಧಿಯಾಗಿ ಕಣಕ್ಕಿಳಿಸಲು ಬೆಂಬಲ ಕ್ರೋಢೀಕರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಂಯುಕ್ತ ಜನತಾದಳ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಹೇಳಿದ್ದಾರೆ.
ಕಾಂಗ್ರೆಸ್, ಬಿಜೆಪಿ, ರಾಷ್ಟ್ರೀಯ ಕಾಂಗ್ರೆಸ್, ಎಡಪಕ್ಷಗಳು, ಅಕಾಲಿ ದಳ, ತೆಲುಗು ದೇಶಂ ಸೇರಿದಂತೆ ವಿವಿಧ ಪಕ್ಷಗಳಲ್ಲಿ ಹೆಗಡೆ ಅವರ ಮಿತ್ರರಿದ್ದು , ರಾಷ್ಟ್ರಪತಿ ಸ್ಥಾನಕ್ಕೆ ಹೆಗಡೆ ಸೂಕ್ತ ವ್ಯಕ್ತಿ ಎಂಬ ಅಭಿಪ್ರಾಯ ರೂಪುಗೊಳ್ಳುತ್ತಿದೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಧ್ಯಾ ಹೇಳಿದರು.
ರಾಷ್ಟ್ರಪತಿ ಸ್ಥಾನಕ್ಕೆ ಹೆಗಡೆ ಅವರ ಉಮೇದುವಾರಿಕೆ ಬೆಂಬಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಎನ್ಸಿಪಿಯ ಶರದ್ ಪವಾರ್ ಜೊತೆ ಚರ್ಚಿಸಿದ್ದೇನೆ. ಶೀಘ್ರದಲ್ಲಿಯೇ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೂ ಈ ವಿಷಯದ ಕುರಿತು ಚರ್ಚಿಸುವುದಾಗಿ ಅವರು ತಿಳಿಸಿದರು.
ವಿದ್ಯುತ್
ಬಿಕ್ಕಟ್ಟನ್ನು
ಬಗೆಹರಿಸುವಲ್ಲಿ
ಮುಖ್ಯಮಂತ್ರಿ
ಎಸ್.ಎಂ.ಕೃಷ್ಣ
ನೇತೃತ್ವದ
ಸರ್ಕಾರ
ಸಂಪೂರ್ಣ
ವಿಫಲವಾಗಿದ್ದು
,
ಇದರ
ಅಡ್ಡ
ಪರಿಣಾಮ
ರೈತರ
ಮೇಲುಂಟಾಗಿದೆ.
ರಾಜ್ಯದ
ಬೊಕ್ಕಸ
ಬಟಾಬರಿದಾಗಿದ್ದು
,
ಸರ್ಕಾರ
ದಿಕ್ಕು
ದೆಸೆಯಿಲ್ಲದೆ
ಸಾಗುತ್ತಿದೆ
ಎಂದು
ಸಿಂಧ್ಯಾ
ದೂರಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...