ಸಿಇಟಿಯಲ್ಲಿ ಮೊದಲ 500 ರ್ಯಾಂಕ್ ಪಡೆಯುವವರಿಗೆ ಪ್ರಶಸ್ತಿ
ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯಲ್ಲಿ ಮೊದಲ 500 ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಕೊಡಲು ಡಾ.ಎಂ.ವಿ.ಜಯರಾಂ ಸ್ಮಾರಕ ಸಂಸ್ಥೆ ನಿರ್ಧರಿಸಿದೆ.
ಶನಿವಾರ ಸಂಸ್ಥೆ ಹೊರಟಿಸಿದ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದೆ. ರ್ಯಾಂಕ್ ವಿಜೇತರಿಗೆ ಪ್ರಶಸ್ತಿ ಕೊಡುವುದಷ್ಟೇ ಅಲ್ಲದೆ, ಇವರಲ್ಲಿ ಕೆಲವರನ್ನು ಆರಿಸಿ, ಯಾವುದೇ ಶುಲ್ಕವಿಲ್ಲದೆ ಶಿಕ್ಷಣ ಒದಗಿಸಲು ಸಂಸ್ಥೆ ನಿರ್ಧರಿಸಿದೆ. ಖುದ್ದು ಸಂಸ್ಥೆಯೇ ಅರ್ಹ ವಿದ್ಯಾರ್ಥಿಗಳನ್ನು ಆರಿಸಿ, ಅವರಿಗೆ ಉಚಿತ ಶಿಕ್ಷಣದ ಜೊತೆಗೆ ಊಟ- ವಸತಿ ಸೌಕರ್ಯವನ್ನೂ ಕಲ್ಪಿಸಿಕೊಡಲಿದೆ. ಇದಕ್ಕೆ ಮೆರಿಟ್ಟೇ ಆಧಾರ.
ಎಂಜಿನಿಯರಿಂಗ್ನ ಮೊದಲ 7 ಸೆಮಿಸ್ಟರ್ಗಳಲ್ಲಿ , ಎಂಬಿಎಯ ಮೊದಲ 3 ಸೆಮಿಸ್ಟರ್ಗಳಲ್ಲಿ ಹಾಗೂ ಎಂಸಿಎಯ ಮೊದಲ 5 ಸೆಮಿಸ್ಟರ್ಗಳಲ್ಲಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆಯುವ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ 1 ಸಾವಿರ ರುಪಾಯಿ ನೀಡಿ ಪುರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...