ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಮೊಗ್ಗದ ಸತ್ಯಪ್ರಕಾಶ್ಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ 2ನೇ ರ್ಯಾಂಕ್
ಶಿವಮೊಗ್ಗ : ಕೇಂದ್ರ ಲೋಕ ಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಗರದ ಟಿ.ಎಲ್.ಸತ್ಯ ಪ್ರಕಾಶ್ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ಈ ಸಾಧನೆ ಮಾಡಿರುವ ಮೊದಲ ಮಲೆನಾಡಿಗ ಎಂಬ ಅಗ್ಗಳಿಕೆ ಪ್ರಕಾಶ್ವರದ್ದು.
ಸೊರಬದ ಗುಡಿಗಾರ (ಶ್ರೀಗಂಧ ಕೆತ್ತನೆಕಾರರು) ಕುಟುಂಬದ ಹಿನ್ನೆಲೆಯವರಾದ ಪ್ರಕಾಶ್ ಪರಿಸರ ಕಾಳಜಿಯುಳ್ಳವರು. ಅನೇಕ ಪರಿಸರ ಸಂರಕ್ಷಣಾ ಚಳವಳಿಗಳಲ್ಲೂ ತೊಡಗಿಕೊಂಡಿದ್ದಾರೆ. ತಂದೆ ಟಿ.ಎಲ್.ಲಕ್ಷ್ಮಣಪ್ಪ ಶಿವಮೊಗ್ಗೆಯ ಜೆಪಿಎನ್ ಜೂನಿಯರ್ ಕಾಲೇಜಿನಲ್ಲಿ ಕ್ರೀಡಾ ನಿರ್ದೇಶಕ. ಪಕ್ಷಿಗಳ ಬಗ್ಗೆ ಕುತೂಹಲ ಇಟ್ಟುಕೊಂಡಿರುವ ಪ್ರಕಾಶ್ಗೆ, ಅವುಗಳನ್ನು ನೋಡುವುದೇ ಒಂದು ಹವ್ಯಾಸ. ಜಿಕೆವಿಕೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಬಿಎಸ್ಸಿ ಪದವಿ ಪಡೆದ ಪ್ರಕಾಶ್, ಸ್ನಾತಕೋತ್ತರ ಪದವಿ ಪಡೆಯಲು ಹರಿಯಾಣದ ಹಿಸಾರ್ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Friday, May 17, 2002, 5:30 [IST]