ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೃಶ್ಯ ಕೈವಾಡ ; ಕಾಣದಂತೆ ಮಾಯವಾದ ಮುತ್ತಪ್ಪ ರೈ ಬೆರಳಚ್ಚು ಪತ್ರ

By Staff
|
Google Oneindia Kannada News

ಬೆಂಗಳೂರು : ದುಬೈ ಪೊಲೀಸ್‌ ಸೆರೆಯಲ್ಲಿರುವ ಭೂಗತ ಜಗತ್ತಿನ ಡಾನ್‌ ಮುತ್ತಪ್ಪ ರೈಯನ್ನು ರಾಜ್ಯದ ಪೊಲೀಸರಿಗೆ ಹಸ್ತಾಂತರಿಸಲು ದುಬೈನ ಹಿರಿಯ ಪೊಲೀಸ್‌ ಅಧಿಕಾರಿಗಳು ಒಪ್ಪಿದ್ದಾರೆ. ಆದರೆ ಮುತ್ತಪ್ಪ ರೈಯನ್ನು ಹಸ್ತಾಂತರಿಸಲು ದುಬೈಗೆ ಕಳುಹಿಸಬೇಕಾಗಿದ್ದ ಆತನ ಬೆರಳು ಗುರುತಿನ ದಾಖಲೆ ಪತ್ರಗಳು ಕಣ್ಮರೆಯಾಗಿವೆ.

ಬುಧವಾರದವರೆಗೂ ಪೊಲೀಸರ ಕಡತಗಳ ರಾಶಿಯಲ್ಲಿದ್ದ ಮುತ್ತಪ್ಪ ರೈ ಫಿಂಗರ್‌ ಪ್ರಿಂಟ್‌ ದಾಖಲೆ ಪತ್ರಗಳು ಇದ್ದಕ್ಕಿದ್ದ ಹಾಗೆ ಕಣ್ಮರೆಯಾಗಿರುವುದು ಆತಂಕ ಮೂಡಿಸಿದೆ. ಈ ಘಟನೆಯಲ್ಲಿ ರಾಜ್ಯದ ಪ್ರಮುಖ ರಾಜಕಾರಣಿಯಾಬ್ಬರ ಕೈವಾಡವಿರುವ ಬಗ್ಗೆ ಶಂಕಿಸಲಾಗಿದೆ. ರಾಜ್ಯದ ಪೊಲೀಸರಿಗೆ ಆತನ ಬೆರಳು ಗುರುತಿನ ದಾಖಲೆ ಪತ್ರಗಳನ್ನು ದುಬೈಗೆ ಕಳುಹಿಸದಂತೆ ರಾಜಕಾರಣಿಯಾಬ್ಬರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ, ಇದು ಮುತ್ತಪ್ಪ ರೈಯ ರಾಜಕೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತಿದೆ.

ರೈ ಬಳಿ ನಕಲಿ ಪಾಸ್‌ಪೋರ್ಟ್‌ ಇರುವುದರಿಂದ ಅಲ್ಲಿನ ಪೊಲೀಸರು ಆತನನ್ನು ಬೆರಳು ಗುರುತಿನ ಮೇಲೆ ಗುರುತಿಸಿ ಬಂಧಿಸಿದ್ದರು. ರೈ ಹಸ್ತಾಂತರಕ್ಕೆ ರಾಜ್ಯ ಪೊಲೀಸರು ಆತನ ಬೆರಳು ಗುರುತಿನ ದಾಖಲೆ ಪತ್ರಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X