ಹೊಸಕೋಟೆಯ ಸೋಲೂರಿನಲ್ಲಿ ವಿದ್ಯುತ್ ಗೋಪುರ ಕುಸಿದು 7ಸಾವು
ಬೆಂಗಳೂರು : ಹೊಸಕೋಟೆ ತಾಲ್ಲೂಕಿನ ಸೋಲೂರು ಗ್ರಾಮದಲ್ಲಿ ವಿದ್ಯುತ್ ಗೋಪುರ ಕುಸಿದು ಏಳು ಮಂದಿ ಕಾರ್ಮಿಕರು ಮೃತರಾದ ದುರಂತ ಗುರುವಾರ ಸಂಭವಿಸಿದೆ.
ವಿದ್ಯುತ್ ಗೋಪುರದ ವಿದ್ಯುತ್ ವಾಹಕವನ್ನು ಬಿಗಿಗೊಳಿಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಸುಮಾರು 3 ಕಿ.ಮೀ. ಉದ್ದದ ತಂತಿಯನ್ನು ಎಳೆದಾಗ 50 ಮೀಟರ್ ಎತ್ತರದ ಗೋಪುರ ಕುಸಿದು ಬಿತ್ತು ಎಂದು ಪೊಲೀಸ್ವರದಿಗಳು ಹೇಳಿವೆ.
ಸತ್ತವರನ್ನು ಗುತ್ತಿಗೆ ಕಾರ್ಮಿಕರಾದ ತಮಿಳುನಾಡಿನ ಜಿ. ವಲ್ಲಾರ್ ಮಣಿ, ಎಸ್. ರವಿಚಂದ್ರನ್, ಕೆ. ಸೆಲ್ವಂ, ತಿರುಮಲೈ, ಅರುರ್, ಎಸ್. ಅನಿಲ್ ಕುಮಾರ್, ಟಿ. ಮಹಾವಿಷ್ಣು ಎಂದು ಗುರುತಿಸಲಾಗಿದೆ. ಈ ದುರಂತವೂ ಸೇರಿದಂತೆ ಕಳೆದ ಆರು ತಿಂಗಳ ಅವಧಿಯಲ್ಲಿ ವಿದ್ಯುತ್ ಗೋಪುರಗಳು ಕುಸಿದು ರಾಜ್ಯದಲ್ಲಿ ಒಟ್ಟು 20 ಮಂದಿ ಅಸುನೀಗಿದಂತಾಗಿದೆ.
ಕಾರ್ಯನಿರ್ವಹಣೆಯ ಬಗ್ಗೆ ಕಾರ್ಮಿಕರಿಗೆ ಸಮರ್ಪಕ ಮಾಹಿತಿ ನೀಡದೇ ಇರುವುದು ಮತ್ತು, ಕಾರ್ಮಿಕರು ಹೆಲ್ಮೆಟ್ನಂತಹ ರಕ್ಷಣಾ ಸಾಧನಗಳನ್ನು ಬಳಸದೇ ಇರುವುದು ದುರಂತಕ್ಕೆ ಕಾರಣವೆನ್ನಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...