ನಾಲ್ಕು ವಾರಗಳ ನಂತರ ಕುಂಬ್ಳೆ ಮೈದಾನಕ್ಕೆ- ತಜ್ಞ ವೈದ್ಯರ ಭರವಸೆ
ಬೆಂಗಳೂರು : ವಿಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಗಲ್ಲದ ಮೂಳೆ ಮುರಿದುಕೊಂಡಿರುವ ಅನಿಲ್ ಕುಂಬ್ಳೆ ನಾಲ್ಕು ವಾರಗಳ ನಂತರ ಮತ್ತೆ ಮೈದಾನಕ್ಕಿಳಿಯಲಿದ್ದಾರೆ ಎಂದು ಅವರನ್ನು ಪರೀಕ್ಷಿಸಿದ ತಜ್ಞ ದಂತ ವೈದ್ಯರ ತಂಡ ತಿಳಿಸಿದೆ. ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕುಂಬ್ಳೆ ಆಡುವುದು ಬಹುತೇಕ ಖಚಿತವಾಗಿದೆ.
ಬುಧವಾರ ಬೆಳ್ಳಂಬೆಳಗ್ಗೆ 4.30 ರ ವೇಳೆಗೆ ಮುಂಬಯಿಯಿಂದ ಬೆಂಗಳೂರಿಗೆ ಬಂದ ಅನಿಲ್ ಕುಂಬ್ಳೆ ಅವರ ಗಾಯವನ್ನು ಆಮೂಲಾಗ್ರ ಪರೀಕ್ಷೆ ಮಾಡಿದ ದಂತ ವೈದ್ಯರ ತಂಡ, ಕುಂಬ್ಳೆ ಅವರ ಕೆಳ ದವಡೆಗೆ ಗಾಯವಾಗಿದ್ದು ಶಸ್ತ್ರ ಚಿಕಿತ್ಸೆ ಅಗತ್ಯ ಎಂದು ಅಭಿಪ್ರಾಯ ಪಟ್ಟಿದೆ. ಕುಂಬ್ಳೆ ಅವರು ಸುಮಾರು ಮೂರು ತಾಸುಗಳ ಕಾಲ ಆಸ್ಪತ್ರೆಯಲ್ಲಿದುದಾಗಿ, ಅವರನ್ನು ಉಪಚರಿಸಿದ ಖಾಸಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಗುರುವಾರ ಕುಂಬ್ಳೆ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯುವ ಸಂಭವವಿದೆ.
ವಿಂಡೀಸ್
ವಿರುದ್ಧದ
ನಾಲ್ಕನೇ
ಟೆಸ್ಟ್ನ
ಶನಿವಾರ
(ಮೇ
12)
ದ
ಆಟದಲ್ಲಿ
,
ಬ್ಯಾಟ್
ಮಾಡುತ್ತಿದ್ದ
ಕುಂಬ್ಳೆ
ವೇಗಿ
ಧಿಲ್ಲಾನ್
ಬೌಲಿಂಗ್ನಲ್ಲಿ
ಪೆಟ್ಟು
ತಿಂದಿದ್ದರು.
ಬ್ಯಾಂಡೇಜ್
ಹಾಕಿಕೊಂಡು,
ಮಾತನಾಡಲು
ಕಷ್ಟವಾಗುತ್ತಿದ್ದರೂ
ಭಾನುವಾರದ
ಆಟದಲ್ಲಿ
14
ಓವರ್
ಬೌಲ್
ಮಾಡಿದ್ದ
ಕುಂಬ್ಳೆ
ಲಾರಾ
ಅವರ
ವಿಕೆಟ್
ಗಳಿಸಿದ್ದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...