ಬೆಂಗಳೂರಿಗೆ ಅನಿಲ್ ಕುಂಬ್ಳೆ; ಗಲ್ಲದ ಗಾಯಕ್ಕೆ ಗುರುವಾರ ಶಸ್ತ್ರ ಚಿಕಿತ್ಸೆ?
ಬೆಂಗಳೂರು : ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ನಲ್ಲಿ ಗಲ್ಲದ ಮೂಳೆ ಮುರಿದುಕೊಂಡರೂ, ಕೆಲಕಾಲ ಕೆಚ್ಚೆದೆಯ ಬೌಲಿಂಗ್ ಪ್ರದರ್ಶಿಸಿ ಕ್ರೀಡಾಪ್ರಿಯರಲ್ಲಿ ರೋಮಾಂಚನ ಮೂಡಿಸಿದ್ದ ಭಾರತದ ಅಗ್ರಮಾನ್ಯ ಸ್ಪಿನ್ನರ್ ಅನಿಲ್ ಕುಂಬ್ಳೆ- ಗಾಯದ ಕುರಿತು ತಮಗೆ ಯಾವುದೇ ವಿಷಾದವಿಲ್ಲ ಎಂದಿದ್ದಾರೆ.
ಗಾಯಗೊಂಡು ಪಂದ್ಯದಿಂದ ಹೊರಗುಳಿದುದಕ್ಕೆ ನನಗೆ ನಿರಾಶೆಯಾಗಿದೆ. ಆದರೆ, ಈ ರೀತಿಯ ಗಾಯಗಳು ಆಟದಲ್ಲಿ ಇದ್ದದ್ದೇ. ಗಾಯ ಕೂಡ ಆಟದ ಒಂದು ಅಂಗ ಎಂದು ಬುಧವಾರ ಬೆಳಗ್ಗೆ ಮುಂಬಯಿಯಿಂದ ಬೆಂಗಳೂರಿಗೆ ಬಂದ ಕುಂಬ್ಳೆ ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಬ್ಯಾಂಡೇಜ್ ಧರಿಸದಿದ್ದರೂ ಮಾತನಾಡಲು ಕಷ್ಟ ಪಡುತ್ತಿದ್ದ ಕುಂಬ್ಳೆ- ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಬರ ಮಾಡಿಕೊಂಡ ಪೋಷಕರು ಹಾಗೂ ಪತ್ನಿಯನ್ನು ನೋಡಿ ಉದ್ವೇಗಗೊಂಡರು. ಬುಧವಾರವೇ ತಜ್ಞ ವೈದ್ಯರನ್ನು ಭೇಟಿ ಮಾಡಿ ಶಸ್ತ್ರ ಚಿಕಿತ್ಸೆಯ ಕುರಿತು ನಿರ್ಣಯಿಸಲಾಗುವುದು ಎಂದು ಅವರು ಹೇಳಿದರು.
ಕುಂಬ್ಳೆ
ಅವರನ್ನು
ಪರೀಕ್ಷಿಸಲು
ಈಗಾಗಲೇ
ದಂತ
ವೈದ್ಯರ
ಗುಂಪು
ಸಿದ್ಧವಾಗಿದ್ದು
,
ಸಂಪೂರ್ಣ
ಪರೀಕ್ಷೆಯ
ನಂತರ
ಶಸ್ತ್ರ
ಚಿಕಿತ್ಸೆ
ಸಮಯವನ್ನು
ನಿಗದಿಪಡಿಸುವರು.
ಗುರುವಾರ
ಶಸ್ತ್ರ
ಚಿಕಿತ್ಸೆ
ನಡೆಯುವ
ಸಾಧ್ಯತೆಯಿದೆ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...