ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಪೊರಕೆ ಪ್ರದರ್ಶನ
ಬೆಂಗಳೂರು : ಗಂಟೆ ಬಾರಿಸುವ, ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸುವ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಈಗ ಹೊಸ ವರಸೆ ತೋರಿದ್ದಾರೆ. ವಿದ್ಯುತ್ ದರ ಏರಿಸಲು ಹೊರಟಿರುವ ಸರ್ಕಾರದ ನಡೆಯನ್ನು ಅವರು ಪ್ರತಿಭಟಿಸಿದ್ದು ಪೊರಕೆ ಪ್ರದರ್ಶನದ ಮೂಲಕ!
ವಿದ್ಯುತ್ ದರ ಏರಿಕೆಯಿಂದ ರೈತರು ಹಾಗೂ ಸಾಮಾನ್ಯ ವರ್ಗದವರಿಗೆ ಭಾರೀ ಹೊರೆಯಾಗಲಿದೆ. ರಾಜ್ಯದ ಎಲ್ಲಾ ಪಕ್ಷಗಳು ಒಂದೇ ವೇದಿಕೆ ನಿರ್ಮಿಸಿ, ಸರ್ಕಾರದ ನಡೆಯನ್ನು ಖಂಡಿಸಬೇಕು. ಡಾ.ವೀರೇಶ್ ಅವರ ಅವೈಜ್ಞಾನಿಕ ವರದಿ, ಕುಡಿಯುವ ನೀರಿನ ತೊಂದರೆ ರೈತರ ಸ್ಥಿತಿಯನ್ನು ಈಗಾಗಲೇ ಹದಗೆಡಿಸಿದೆ. ಭಾಗ್ಯ ಜ್ಯೋತಿ ಯೋಜನೆಯಡಿ ಸೌಲಭ್ಯ ಪಡೆಯಲು ಕೂಡ ದುಡ್ಡು ಕಟ್ಟಬೇಕಾದ ಪರಿಸ್ಥಿತಿಯಿದೆ. ಈ ಯೋಜನೆಯ ಹೆಸರನ್ನಾದರೂ ಸರ್ಕಾರ ಬದಲಿಸಲಿ ಎಂದು ವಾಟಾಳ್ ಆಗ್ರಹಿಸಿದರು.
ಆದರೆ, ಪೊರಕೆ ಪ್ರದರ್ಶನವನ್ನೇ ಆರಿಸಿಕೊಂಡದ್ದು ಯಾಕೆ ಎಂಬ ಪ್ರಶ್ನೆಗೆ ಅವರು ಉತ್ತರ ಕೊಡಲಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, May 11, 2002, 5:30 [IST]