ನಾಡಿನ ಹಿರಿಯ ಬ್ರಹ್ಮಚಾರಿ ಎಚ್.ನರಸಿಂಹಯ್ಯಗೆ ಬಸವ ಪುರಸ್ಕಾರ
ಬೆಂಗಳೂರು : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರಿಗೆ 2001 ನೇ ಇಸವಿಯ ಬಸವ ಪ್ರಶಸ್ತಿ ದೊರೆತಿದೆ. ಬಸವ ತತ್ವಗಳನ್ನು ಜೀವಂತವಾಗಿಡುವಲ್ಲಿ ಮಹತ್ತರ ಪಾತ್ರ ವಹಿಸಿದ ಗಣ್ಯರಿಗೆ ರಾಜ್ಯ ಸರ್ಕಾರ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ.
ಮೇ 14 ರಂದು ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನರಸಿಂಹಯ್ಯನವರಿಗೆ ಬಸವ ಪುರಸ್ಕಾರವನ್ನು ಪ್ರದಾನ ಮಾಡುವರು. 1.5 ಲಕ್ಷ ರುಪಾಯಿ ನಗದು, ಅಭಿನಂದನೆ ಹಾಗೂ ಪ್ರಶಂಸಾ ಪತ್ರವನ್ನು ಪ್ರಶಸ್ತಿ ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಜಿ.ನಾರಾಯಣ ಅವರ ನೇತೃತ್ವದ ಆಯ್ಕೆ ಸಮಿತಿ ಬಸವ ಪ್ರಶಸ್ತಿಗೆ ನರಸಿಂಹಯ್ಯನವರನ್ನು ಆಯ್ಕೆ ಮಾಡಿದೆ.
ಸರ್ಕಾರದ
ವತಿಯಿಂದ
ಬಸವ
ಜಯಂತಿ
ಪ್ರಸಕ್ತ
ವರ್ಷದಿಂದ
ರಾಜ್ಯ
ಸರ್ಕಾರದ
ವತಿಯಿಂದ
ಬಸವ
ಜಯಂತಿಯನ್ನು
ಆಚರಿಸಲು
ರಾಜ್ಯ
ಸರ್ಕಾರ
ಸುತ್ತೋಲೆ
ಹೊರಡಿಸಿದೆ
ಎಂದು
ಕನ್ನಡ
ಮತ್ತು
ಸಂಸ್ಕೃತಿ
ಖಾತೆ
ಸಚಿವ
ರಾಣಿ
ಸತೀಶ್
ತಿಳಿಸಿದ್ದಾರೆ.
ಬಸವಣ್ಣನವರು
ಪ್ರತಿಪಾದಿಸಿದ
ಸಮಾಜ
ಸುಧಾರಣೆ,
ಸಮಾಜ
ಪರಿವರ್ತನೆ,
ಸರ್ವಧರ್ಮ
ಸಮನ್ವಯ
ಮೌಲ್ಯಗಳಿಗೆ
ಎಚ್ಚೆನ್
ತಮ್ಮನ್ನು
ತಾವೇ
ಅರ್ಪಿಸಿಕೊಂಡಿದ್ದು
,
ಪ್ರಶಸ್ತಿಗೆ
ಅವರ
ಆಯ್ಕೆ
ಸೂಕ್ತವಾಗಿದೆ
ಎಂದು
ರಾಣಿ
ಸತೀಶ್
ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ
ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...