ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಳತ್ತೂರು ಮಣಿ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಕ್ಕೆ ಧಿಕ್ಕಾರ

By Staff
|
Google Oneindia Kannada News

ಕೊಯಮತ್ತೂರು : ವೀರಪ್ಪನ್‌ ಶಿಕಾರಿ ನೇತೃತ್ವದ ನಿಗಾ ವಹಿಸಲು ನಿವೃತ್ತ ಪೊಲೀಸ್‌ ಅಧಿಕಾರಿ ಶ್ರೀನಿವಾಸಲು ಅವರನ್ನು ನೇಮಿಸಿರುವ ವಿಷಯ ಕರ್ನಾಟಕದಲ್ಲಿ ಚರ್ಚೆಯಾಗುತ್ತಿದ್ದರೆ, ಅತ್ತ ತಮಿಳುನಾಡಲ್ಲಿ ಕೊಳತ್ತೂರು ಮಣಿ ಅವರನ್ನು ಕರ್ನಾಟಕ ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.

ಕಾಡುಗಳ್ಳ, ನರಹಂತಕ ವೀರಪ್ಪನ್‌ ಜೊತೆ ಸಂಬಂಧ ಹೊಂದಿರುವ ಗುಮಾನಿಯ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಬಂಧಿಸಿರುವ ಕೊಳತ್ತೂರು ಮಣಿಯನ್ನು ಬಿಡುಗಡೆ ಮಾಡುವಂತೆ ದ್ರಾವಿಡ ಕಳಗಂನ ಸುಮಾರು 65 ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿ, ಪೊಲೀಸರ ಬಂಧನಕ್ಕೊಳಗಾಗಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಕೆ. ರಾಮಕೃಷ್ಣನ್‌ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಣಿಯನ್ನು ಕರ್ನಾಟಕ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು , ಆತನನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಚಳವಳಿಕಾರರು ಆಗ್ರಹಿಸಿದರು.

ನರಹಂತಕನ ಸೆರೆಯಿಂದ ವರನಟ ರಾಜ್‌ಕುಮಾರ್‌ ಬಿಡುಗಡೆ ಪ್ರಕರಣದಲ್ಲಿ ಕೊಳತ್ತೂರು ಮಣಿ ಸಂಧಾನಕಾರರಾಗಿ ಪ್ರಮುಖ ಪಾತ್ರ ವಹಿಸಿದ್ದರು. ಸಂಧಾನಕಾರರಾಗಿ ಕಾಡಿಗೆ ಹೋಗಲು ನೆಡುಮಾರನ್‌ ಅವರ ಮನಸ್ಸು ಒಲಿಸಿದವರಲ್ಲಿ ಮಣಿ ಪ್ರಮುಖರು. ಆದರೆ, ರಾಜ್‌ ಬಿಡುಗಡೆ ಮಧ್ಯಸ್ಥಿಕೆಯಲ್ಲಿ ಮಣಿ ಕೋಟ್ಯಂತರ ರುಪಾಯಿ ಗುಳುಂ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X