ಶನಿವಾರ ಕರ್ನಾಟಕ ಬಂದ್ಗೆ ಬಿಜೆಪಿ ಕರೆ ; ಎಸ್ಸೆಂ ಕೃಷ್ಣರಿಗೆ ದೆಹಲಿ ಕರೆ!
ಬೆಂಗಳೂರು : ವಿದ್ಯುತ್ ದರ ಏರಿಕೆ ಪ್ರತಿಭಟಿಸಿ ಭಾರತೀಯ ಜನತಾ ಪಕ್ಷ ರಾಜ್ಯ ಬಂದ್ಗೆ ಶನಿವಾರ (ಮೇ 11) ಕರೆ ನೀಡಿದ್ದರೆ, ಮುಖ್ಯಮಂತ್ರಿ ಕೃಷ್ಣ ಸಭೆಯಾಂದರಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದಾರೆ.
ಬಂದ್ ಸಂಬಂಧ ಮುಂಜಾಗರೂಕತಾ ಕ್ರಮವಾಗಿ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಬಂದ್ ಕರೆಯ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಮುಂಜಾಗರೂಕತಾ ಕ್ರಮವಾಗಿ ರಾಜ್ಯದೆಲ್ಲೆಡೆ ಬಂದೋಬಸ್ತ್ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುಭಾಷ್ ಭರಣಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಎಲ್ಲ ಪೊಲೀಸ್ ಅಧಿಕಾರಿಗಳಿಗೂ ರಜೆಯನ್ನು ರದ್ದು ಪಡಿಸಿದ್ದು , ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ಎಲ್ಲಾ ಜಿಲ್ಲೆಗಳಿಗೂ ಕೆಎಸ್ಆರ್ಪಿ ತುಕಡಿಗಳನ್ನು ಕಳುಹಿಸಲಾಗಿದೆ. ಶಾಂತಿ ರಕ್ಷಣಾ ಕಾರ್ಯದಲ್ಲಿ ಗೃಹ ರಕ್ಷಣಾ ದಳವನ್ನೂ ನಿಯೋಜಿಸಿಕೊಳ್ಳಲಾಗಿದೆ ಎಂದು ಸುಭಾಷ್ ಭರಣಿ ಕಾನೂನು ಸುವ್ಯವಸ್ಥೆಯ ವಿವರ ನೀಡಿದರು. ಬಂದ್ ಶಾಂತಿಯುತವಾಗಿರುತ್ತದೆ ಎಂದು ರಾಜ್ಯ ಬಿಜೆಪಿ ಆಶ್ವಾಸನೆ ನೀಡಿದೆ ಎಂದು ಅವರು ಹೇಳಿದರು.
ಬೆಂಗಳೂರಲ್ಲಿ
ಬಿಗಿ
ಬಂದೋಬಸ್ತ್
ಬಂದ್
ಸಂಬಂಧ
ಬೆಂಗಳೂರು
ಮಹಾ
ನಗರದಲ್ಲಿ
ಕಟ್ಟು
ನಿಟ್ಟಿನ
ಪೊಲೀಸ್
ಬಂದೋಬಸ್ತ್
ಮಾಡಲಾಗಿದೆ.
ಶಾಂತಿ
ಪಾಲನೆಗೆ
ಎಲ್ಲ
ಅಗತ್ಯ
ಕ್ರಮಗಳನ್ನು
ಕೈಗೊಳ್ಳಲಾಗಿದೆ
ಎಂದು
ನಗರ
ಪೊಲೀಸ್
ಕಮೀಷನರ್
ಎಚ್.ಟಿ.ಸಾಂಗ್ಲಿಯಾನ
ತಿಳಿಸಿದ್ದಾರೆ.
ಅಂಗಡಿ
ಮುಂಗಟ್ಟುಗಳನ್ನು
ಬಲವಂತವಾಗಿ
ಮುಚ್ಚಿಸುವವರ
ವಿರುದ್ಧ
ಕಠಿಣ
ಕ್ರಮ
ಕೈಗೊಳ್ಳುವುದಾಗಿ
ಅವರು
ಎಚ್ಚರಿಸಿದ್ದಾರೆ.
ನಗರ ಸಾರಿಗೆ, ಔಷಧಿ ಮಳಿಗೆ, ಆಸ್ಪತ್ರೆ, ಹಾಲು ಸರಬರಾಜು, ತರಕಾರಿ ಮುಂತಾದ ಅಗತ್ಯ ಸೇವೆಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾಂಗ್ಲಿಯಾನ ತಿಳಿಸಿದರು.
ಕೃಷ್ಣ
ದೆಹಲಿಗೆ
ಏಡ್ಸ್
ಕುರಿತ
ಅಂತರರಾಷ್ಟ್ರೀಯ
ನೀತಿ
ನಿರೂಪಕರ
ಸಭೆಯಲ್ಲಿ
ಭಾಗವಹಿಸಲು
ಮುಖ್ಯಮಂತ್ರಿ
ಎಸ್.ಎಂ.ಕೃಷ್ಣ
ಶುಕ್ರವಾರ
ದೆಹಲಿಗೆ
ಪ್ರಯಾಣ
ಬೆಳೆಸಿದ್ದಾರೆ.
ದೆಹಲಿ
ಭೇಟಿ
ಸಂದರ್ಭದಲ್ಲಿ
ಅವರು
ರಾಜ್ಯ
ಸಚಿವ
ಸಂಪುಟ
ವಿಸ್ತರಣೆ
ಕುರಿತು
ವರಿಷ್ಠರೊಂದಿಗೆ
ಮಾತುಕತೆ
ನಡೆಸುವ
ನಿರೀಕ್ಷೆಯಿದೆ.
ಮೇ
12
ರಂದು
ಮುಖ್ಯಮಂತ್ರಿ
ಕೃಷ್ಣ
ಬೆಂಗಳೂರಿಗೆ
ವಾಪಸ್ಸಾಗಲಿದ್ದಾರೆ.
(ಇನ್ಪೋ
ವಾರ್ತೆ)
ಮುಖಪುಟ / ಕೃಷ್ಣಗಾರುಡಿ