ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ರಾಯಚೂರು ವಿದ್ಯುತ್‌ ಘಟಕಗಳ ವೈಪಲ್ಯಕ್ಕೆ ವಾಸ್ತು ದೋಷವೇ ಕಾರಣ’

By Staff
|
Google Oneindia Kannada News

ಬೆಂಗಳೂರು: ಕರ್ನಾಟಕ ವಿದ್ಯುತ್‌ ನಿಗಮ ನಿರ್ವಹಿಸುತ್ತಿರುವ ರಾಯಚೂರು ಥರ್ಮಲ್‌ ಪವರ್‌ ಸ್ಟೇಷನ್‌ನಲ್ಲಿ ಆಗಾಗ್ಗೆ ಘಟಕಗಳು ಕಾರ್ಯವಿಫಲವಾಗುವುದಕ್ಕೆ ವಾಸ್ತು ದೋಷವೇ ಕಾರಣ ಎಂದು ಪ್ರಸಿದ್ಧ ಕಾರ್ಪೊರೇಟ್‌ ಜ್ಯೋತಿಷಿ ಸೋಮಯಾಜಿ ಹೇಳಿದ್ದಾರೆ.

‘ವಾಸ್ತು ಪ್ರಕಾರ ಅವ್ಯಕ್ತ ಶಕ್ತಿಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸುವ ಮೂಲಕ ರಚಿಸಿದ ಸೌಧದಲ್ಲಿ ಎಲ್ಲ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ. ನಾನು ನಾಲ್ಕು ವರ್ಷದ ಹಿಂದೆ ರಾಯಚೂರು ವಿದ್ಯುತ್‌ ಉತ್ಪನ್ನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆಗಲೂ ವಿದ್ಯುತ್‌ ಉತ್ಪಾದನಾ ಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಈಗ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಈ ಘಟಕದ ಜವಾಬ್ದಾರಿ ಕೆಪಿಸಿಗೆ ಇನ್ನಷ್ಟು ಭಾರವಾಗಲಿದೆ’ ಎಂದು ಸೋಮಯಾಜಿ ಅಭಿಪ್ರಾಯಪಟ್ಟಿದ್ದಾರೆ.

ಈ ಘಟಕದ ವಾಸ್ತುವನ್ನು ಸರಿಪಡಿಸದೇ ಇದ್ದರೆ ಘಟಕಗಳು ವಿಫಲವಾಗುವುದು ಮುಂದುವರೆಯುತ್ತದೆ. ಶಕ್ತಿ ತರಂಗಗಳು ಮತ್ತು ಗುರುತ್ವಾಕರ್ಷಣ ಶಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಆರ್‌ಟಿಪಿಎಸ್‌ನ ವಾಸ್ತುವನ್ನು ಬದಲಾಯಿಸಿದಲ್ಲಿ ಎಲ್ಲ ಘಟಕಗಳೂ ನಿರಾತಂಕವಾಗಿ ಕಾರ್ಯನಿರ್ವಹಿಸುತ್ತವೆ. ಇಲ್ಲದೇ ಇದ್ದಲ್ಲಿ ಕೆಪಿಸಿಯೂ ತೀರಾ ಸಂಕಷ್ಟಕ್ಕೆ ಗುರಿಯಾಗಲಿದೆ ಎಂದು ಸೋಮಯಾಜಿ ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X