ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇತರರ ನೋಯಿಸದಿರೋಣ, ತಾಯಿಯ ಗೌರವಿಸೋಣ-ಸಾಯಿಬಾಬಾ

By Staff
|
Google Oneindia Kannada News

ಬೆಂಗಳೂರು : ಹಣದ ಹುಚ್ಚು ಹೆಚ್ಚುತ್ತಿದ್ದು , ಆತ್ಮ ಗೌರವಕ್ಕೆ ಬೆಲೆಯೇ ಇಲ್ಲವಾಗಿದೆ. ಆದರೆ, ಹಣದ ಆಮಿಷಕ್ಕೆ ದೇವರು ಒಲಿಯುವುದಿಲ್ಲ ಎಂದು ಸತ್ಯ ಸಾಯಿ ಬಾಬಾ ಹೇಳಿದ್ದಾರೆ.

ಹಣಕ್ಕಾಗಿ ಹುಲ್ಲು ತಿನ್ನಲೂ ಹಿಂಜರಿಯದ ಜನರಿದ್ದಾರೆ. ಜನರು ಹಣಕ್ಕೆ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯ ಕೊಡುತ್ತಿದ್ದಾರೆ ಎಂದು ವೈಟ್‌ಫೀಲ್ಡ್‌ನ ಬೃಂದಾವನದಲ್ಲಿ ಸೋಮವಾರ ನಡೆದ ತಾಯಿ ಈಶ್ವರಮ್ಮ ದಿನಾಚರಣೆಯಲ್ಲಿ ಮಾತನಾಡಿದ ಸಾಯಿ ಬಾಬಾ ಹೇಳಿದರು.

ಮೂಲಭೂತ ಮೌಲ್ಯಗಳು ತಾಯಿಯನ್ನು ಗೌರವಿಸುವ ಮೂಲಕ ಆರಂಭಗೊಳ್ಳುತ್ತವೆ. ತಾಯಿಯ ಪ್ರೀತಿಗಿಂತ ಜಗತ್ತಿನಲ್ಲಿ ಅಮೂಲ್ಯವಾದುದು ಯಾವುದೂ ಇಲ್ಲ . ತಾಯಿಯ ಪಾವಿತ್ರ್ಯವನ್ನು ಗೌರವಿಸಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದ ಬಾಬಾ, ಇನ್ನೊಬ್ಬರಿಗೆ ನೋವು ಉಂಟು ಮಾಡದಿರುವುದೇ ನಾವು ಅವರಿಗೆ ಮಾಡಬಹುದಾದ ದೊಡ್ಡ ಸಹಾಯ ಎಂದರು.

ತಾಯಿ ತನ್ನ ಮಕ್ಕಳನ್ನು ಪ್ರೀತಿಸುವಂತೆ ಇತರರ ಸೇವೆಯನ್ನು ಮಾಡುವವನೇ ಸುಶಿಕ್ಷಿತ ಮನುಷ್ಯ. ಪ್ರತಿಯಾಬ್ಬರೂ ಸುಶಿಕ್ಷಿತ ಮನುಷ್ಯರಾಗಬೇಕಿದೆ ಎಂದು ಸಾಯಿ ಬಾಬಾ ಕರೆ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X