ಮೇ 14ರಂದು ಕಾಗಿನೆಲೆ ಶಾಖಾ ಮಠಕ್ಕೆ ಉತ್ತರಾಧಿಕಾರಿಗಳ ಘೋಷಣೆ
ದಾವಣಗೆರೆ : ಕಾಗಿನೆಲೆ ಪೀಠದ ನಾಲ್ಕು ಶಾಖಾ ಮಠಗಳಿಗೆ ಉತ್ತರಾಧಿಕಾರಿಗಳ ನೇಮಕ ಪ್ರಕ್ರಿಯೆಯು ಮೇ 14ರಂದು ನಡೆಯಲಿದೆ ಎಂದು ಕಾಗಿನೆಲೆಯ ಸಿದ್ಧರಾಮಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.
ಕುರುಬರ ಸಂಘದ ಆಶ್ರಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿ ಈ ವಿಷಯ ತಿಳಿಸಿದರು. ಕಾಗಿನೆಲೆ ಪೀಠದ ನಾಲ್ಕು ಶಾಖಾ ಮಠಗಳಾದ ಬೆಂಗಳೂರು, ಮೈಸೂರು, ಗುಲ್ಬರ್ಗ ಮತ್ತು ಬೆಳಗಾವಿ ಮಠಗಳಿಗೆ ಮೇ 14ರಂದು ಉತ್ತರಾಧಿಕಾರಿಗಳನ್ನು ಘೋಷಿಸಲಾಗುವುದು. ಉತ್ತರಾಧಿಕಾರಿಗಳನ್ನು ಘೋಷಿಸಿದ ನಂತರ ಪೀಠ ಸ್ವೀಕಾರ ಕಾರ್ಯಕ್ರಮವನ್ನೂ ಸದ್ಯದಲ್ಲೇ ಆಯೋಜಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಕುರುಬರ ಸಮಾಜ ಬಹಳ ಸಮಸ್ಯೆಗಳನ್ನು ಎದುರಿಸುತ್ತಿದ್ದು ಪರಿಹಾರ ಕಾಣದೇ ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಹೆಣಗಾಡುತ್ತಿದೆ ಎಂದು ಸ್ವಾಮೀಜಿ ವಿಷಾದಿಸಿರು. ದಾವಣಗೆರೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಜಿ. ದ್ಯಾಮಪ್ಪ ಅವರು ಮಾತನಾಡಿ ಕುರುಬರಿಗೆ ತಡವಾಗಿ ಒಗ್ಗಟ್ಟಿನ ಬುದ್ಧಿ ಬಂದಿದೆ. ಈ ಒಗ್ಗಟ್ಟು ಹಿಂದೆಯೇ ಇದ್ದಿದ್ದರೆ, ಕುರುಬರೂ ಇತರ ಸಮಾಜದವರೊಡನೆ ಸಮಾನರಾಗಿ ಬಾಳಬಹುದಿತ್ತು ಎಂದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...