ಸೋನಿಯಾ ಗಾಂಧಿ ಮಾತಾಡುವ ಮುನ್ನ ತೂಕ ಮಾಡಬೇಕು- ಜನಾ
ಮುಂಬಯಿ : ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸರ್ಕಾರವನ್ನು ಗುಜರಾತ್ ಹಿಂಸಾಚಾರದ ವಿಷಯದಲ್ಲಿ ವಿರೋಧ ಪಕ್ಷಗಳು ಟೀಕಿಸುತ್ತಿರುವ ಪರಿ ಹೇಯಕರವಾಗಿದೆ. ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಎಲ್ಲಾ ಮಿತಿಗಳನ್ನೂ ಮೀರಿ ಎಗ್ಗಿಲ್ಲದೆ ಮಾತಾಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜನಾ ಕೃಷ್ಣಮೂರ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಕ್ಷದ ಮಹಾರಾಷ್ಟ್ರ ಘಟಕದ ಎರಡು ದಿನಗಳ ಅವಧಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುದ್ದಿಗಾರರಿಗೆ ಕೃಷ್ಣಮೂರ್ತಿ ಈ ವಿಷಯ ತಿಳಿಸಿದ್ದಾರೆ. ಸೋನಿಯಾ ಗಾಂಧಿ ಮಾತಾಡುವ ಎಚ್ಚರದಿಂದಿರಬೇಕು. ತೂಕ ಮಾಡಿ, ಮಾತಾಡಬೇಕು. ನಾವೂ ಇಂಥ ಆಟ ಆಡಲು ಶುರುವಿಟ್ಟರೆ, ವಿರೋಧ ಪಕ್ಷದವರು ಸಂಸತ್ನಲ್ಲಿ ಕೂರುವುದು ಸಾಧ್ಯವೇ ಇಲ್ಲ ಎಂದರು.
ರಾಜ್ಯಗಳ ಮತ್ತು ಕೇಂದ್ರದ ಸಂಬಂಧ ಚೆನ್ನಾಗೇ ಇದೆ. ನರೇಂದ್ರ ಮೋದಿ ರಾಜೀನಾಮೆ ಕೇಳುವ ಯಾವುದೇ ಸಂವಿಧಾನಾತ್ಮಕ ಹಕ್ಕು ಗುಜರಾತ್ನ ಹೊರಗಿರುವ ರಾಜಕೀಯ ನಾಯಕರಿಗಿಲ್ಲ. ರಕ್ಷಣ ಆಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ವಿರೋಧ ಪಕ್ಷಗಳು ನಿಷೇಧಿಸಿರುವುದು ಅಸಭ್ಯಕರ. ರಾಜಕೀಯದಲ್ಲಿ ವೈಯಕ್ತಿಕ ವಿರೋಧವೇ ಅತಿಯಾಗಿ ಬೆಳೆಯುತ್ತಿರುವುದು ಈಚಿನ ದುರಂತ ಎಂದು ಕೃಷ್ಣಮೂರ್ತಿ ವಿಷಾದಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...