ಹೊಟೇಲ್ ಉದ್ಯಮಕ್ಕೆ ಪಂಚತಾರಾ ರಂಗು ಬಳಿದ ಒಬೆರಾಯ್ ನಿಧನ
ನವದೆಹಲಿ : ಜಾಗತಿಕ ಹೊಟೇಲ್ ಉದ್ಯಮದಲ್ಲಿ ಎದ್ದು ಕಾಣುವ ಒಬೆರಾಯ್ ಗ್ರೂಪ್ ಅಧ್ಯಕ್ಷ ರಾಜ್ ಬಹದ್ದೂರ್ ಮೋಹನ್ಸಿಂಗ್ ಒಬೆರಾಯ್ ಶುಕ್ರವಾರ (ಮೇ3) ನಿಧನರಾದರು. ಅವರಿಗೆ 103 ವರ್ಷ ವಯಸ್ಸಾಗಿತ್ತು . ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಬಂಧುವರ್ಗವನ್ನು ಒಬೆರಾಯ್ ಅಗಲಿದ್ದಾರೆ.
ಕೆಲ ಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಎಂ.ಎಸ್.ಒಬೆರಾಯ್ ಶುಕ್ರವಾರ ಮೊದಲ ಜಾವ 02.30 ರ ಸುಮಾರಿಗೆ ನಿಧನರಾದರು ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ. ಹೊಟೇಲ್ ಉದ್ಯಮಕ್ಕಾಗಿ ಸಲ್ಲಿಸಿದ ಗಣನೀಯ ಸೇವೆಗಾಗಿ ಒಬೆರಾಯ್ ಅವರಿಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಅವಿಭಜಿತ ಪಂಜಾಬ್ನಲ್ಲಿ (ಪ್ರಸ್ತುತ ಪಾಕಿಸ್ತಾನದಲ್ಲಿರುವ) ಜನಿಸಿದ್ದ ಒಬೆರಾಯ್ ಅವರು, ವಿಶ್ವದರ್ಜೆಯ ಒಬೆರಾಯ್ ಹೊಟೇಲ್ಗಳನ್ನು ನಿರ್ಮಿಸುವ ಮೂಲಕ ಭಾರತೀಯ ಹೊಟೇಲ್ ಉದ್ಯಮದ ಆಧಾರ ಸ್ಥಂಭಗಳಲ್ಲಿ ಒಬ್ಬರೆಂದು ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಪ್ರಸಿದ್ಧರು. ಅವರು ತಮಗೆ ಗುರು, ತಂದೆ, ಸ್ನೇಹಿತರಾಗಿದ್ದರು ಎಂದು ಒಬೆರಾಯ್ ಪುತ್ರ ಹಾಗೂ ಕಂಪನಿಯ ಉಪಾಧ್ಯಕ್ಷ ಪಿಆರ್ಎಸ್ ಒಬೆರಾಯ್ ಹೇಳಿದ್ದಾರೆ.
1962
ರಿಂದ
1972
ರವರೆಗೆ
ರಾಜ್ಯಸಭಾ
ಸದಸ್ಯರಾಗಿದ್ದ
ಎಂ.ಎಸ್.
ಒಬೆರಾಯ್
1968
ರಲ್ಲಿ
ಲೋಕಸಭೆಗೂ
ಚುನಾಯಿತರಾಗಿದ್ದರು.
1965
ರಲ್ಲಿ
ದೆಹಲಿಯಲ್ಲಿ
ಪಂಚತಾರಾ
ಹೊಟೇಲ್
ಸ್ಥಾಪಿಸುವ
ಮೂಲಕ,
ಭಾರತದಲ್ಲಿ
ಪಂಚತಾರಾ
ಹೊಟೇಲ್ಗಳ
ಜಮಾನ
ಶುರು
ಮಾಡಿದ
ಒಬೆರಾಯ್,
ಸರಣಿ
ಹೊಟೇಲ್ಗಳನ್ನು
ಭಾರತದಲ್ಲಿ
ಪ್ರಾರಂಭಿಸಿದ
ಮೊದಲಿಗ.
ಸಾಂಸ್ಕೃತಿಕ
ಸ್ಮರಣಿಕೆಗಳು,
ಅರಮನೆಗಳನ್ನು
ಹೊಟೇಲ್ಗಳಾಗಿ
ರೂಪಾಂತರಗೊಳಿಸಿದ
ಕೀರ್ತಿಯೂ
ಅವರಿಗೆ
ಸಲ್ಲುತ್ತದೆ.
(ಪಿಟಿಐ)
ಅಗಲಿದ
ಇನ್ನೊಬ್ಬ
ಹೊಟೇಲ್
ಉದ್ಯಮಿ
ಮುಖಪುಟ
/
ಇವತ್ತು...
ಈ
ಹೊತ್ತು...