ಉತ್ತರ ಪ್ರದೇಶ : ಬಿಜೆಪಿ-ಬಿಎಸ್ಪಿ ಮರು ಮದುವೆಗೆ ರಾಜ್ಯಪಾಲರ ಮುದ್ರೆ
ಲಕ್ನೋ : ಉತ್ತರ ಪ್ರದೇಶದಲ್ಲಿ ಅಧಿಕಾರ ಹೊಂದಾಣಿಕೆಯ ಗೊಂದಲಗಳು ಕೊನೆಗೊಂಡಿದ್ದು , ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ನಾಯಕಿ ಮಾಯಾವತಿ ಅವರಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲ ವಿಷ್ಣುಕಾಂತ ಶಾಸ್ತ್ರಿ ಆಹ್ವಾನ ನೀಡಿದ್ದಾರೆ.
ಬಿಎಸ್ಪಿ ನಾಯಕಿ ಮಾಯಾವತಿ ಅವರು ತಮ್ಮ ಬೆಂಬಲಿಗರ ಪಟ್ಟಿಯನ್ನು ಸೋಮವಾರ ಬೆಳಗ್ಗೆ ರಾಜ್ಯಪಾಲರಿಗೆ ಸಲ್ಲಿಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಪಾಲ ವಿಷ್ಣುಕಾಂತ ಶಾಸ್ತ್ರಿ ಅವರು- ಮಾಯಾವತಿ ಅವರು ಸ್ಥಿರ ಸರ್ಕಾರ ನೀಡುವರೆಂದು ತಮಗೆ ಮನವರಿಕೆಯಾಗಿದೆ. ತಮ್ಮನ್ನು ಬೆಂಬಲಿಸುವ 211 ಶಾಸಕರ ಪಟ್ಟಿಯನ್ನು ಮಾಯಾವತಿ ತಮಗೆ ಸಲ್ಲಿಸಿರುವುದಾಗಿ ಹೇಳಿದರು.
ಕೇಂದ್ರ
ಸರ್ಕಾರಕ್ಕೆ
ಬಿಎಸ್ಪಿ
ಬೆಂಬಲ
ಉತ್ತರ
ಪ್ರದೇಶದಲ್ಲಿ
ಸರ್ಕಾರ
ರಚಿಸಲು
ಬಿಎಸ್ಪಿಯಾಂದಿಗೆ
ಕೈಗೂಡಿಸಿದ
ಬಿಜೆಪಿ
ಹಾಗೂ
ಮಿತ್ರಪಕ್ಷಗಳಿಗೆ
ಕೃತಜ್ಞತೆ
ಸಲ್ಲಿಸಿರುವ
ಬಿಎಸ್ಪಿ
ನಾಯಕಿ
ಮಾಯಾವತಿ,
ತಮ್ಮ
ಪಕ್ಷ
ಕೇಂದ್ರದಲ್ಲಿ
ಬಿಜೆಪಿಯನ್ನು
ಸಂಪೂರ್ಣವಾಗಿ
ಬೆಂಬಲಿಸುವುದಾಗಿ
ಪ್ರಕಟಿಸಿದ್ದಾರೆ.
ಉತ್ತರ
ಪ್ರದೇಶ
ವಿಧಾನಸಭೆಯ
ಸ್ಪೀಕರ್
ಅಭ್ಯರ್ಥಿಯನ್ನು
ಬಿಜೆಪಿ
ಸೂಚಿಸುತ್ತದೆ.
ರಾಷ್ಟ್ರಪತಿ
ಹಾಗೂ
ಉಪ
ರಾಷ್ಟ್ರಪತಿ
ಚುನಾವಣೆಯಲ್ಲಿಯೂ
ಬಿಜೆಪಿಯನ್ನು
ಬಿಎಸ್ಪಿ
ಬೆಂಬಲಿಸುತ್ತದೆ
ಎಂದು
ಮಾಯಾವತಿ
ಹೇಳಿದರು.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...