ಆಂಧ್ರಕ್ಕೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ : ಕೇಂದ್ರದ ವಿರುದ್ಧ ಶ್ರೀಕಂಠಯ್ಯ ಕೆಂಡ
ಬೆಂಗಳೂರು : ರಾಜ್ಯದ ಬಗೆಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು , ರಾಜ್ಯದಲ್ಲಿನ ಬರ ಪರಿಹಾರ ಕಾಮಗಾರಿಗಳಿಗೆ ಅತ್ಯಲ್ಪ ಪ್ರಮಾಣದ ಹಣಕಾಸು ನೆರವನ್ನು ಒದಗಿಸುತ್ತಿದೆ ಎಂದು ಕಂದಾಯ ಸಚಿವ ಎಚ್.ಸಿ.ಶ್ರೀಕಂಠಯ್ಯ ಆಪಾದಿಸಿದ್ದಾರೆ.
ಕೇಂದ್ರ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರಿ ನೆರೆಯ ಆಂಧ್ರಪ್ರದೇಶ ಹೆಚ್ಚಿನ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದೆ. ಆದರೆ, ವಿರೋಧ ಪಕ್ಷವಾದ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಕಂಠಯ್ಯ ಹೇಳಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದ್ದರೆ ರಾಜ್ಯಗಳ ನಡುವೆ ಪಕ್ಷಪಾತ ಧೋರಣೆಯನ್ನು ಎಂದಿಗೂ ಅನುಸರಿಸುತ್ತಿರಲಿಲ್ಲ ಎಂದು ಹೇಳಿದ ಸಚಿವರು, ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ಕೇಂದ್ರದ ಸಮಿತಿ ವರದಿ ಸಲ್ಲಿಸಿದರೂ ರಾಜ್ಯಕ್ಕೆ ಏನೂ ಉಪಯೋಗವಾಗಿಲ್ಲ . ರಾಜ್ಯದಲ್ಲಿನ 175 ತಾಲ್ಲೂಕುಗಳ ಪೈಕಿ 152 ತಾಲ್ಲೂಕುಗಳು ಬರದ ದವಡೆಗೆ ಸಿಲುಕಿದ್ದು , ರಾಜ್ಯ ಸರ್ಕಾರ 800 ಕೋಟಿ ರುಪಾಯಿಗಳ ನೆರವಿಗಾಗಿ ಕೇಂದ್ರ ಸರ್ಕಾರವನ್ನು ಕೋರಿದೆ. ಆದರೆ, ಈವರೆಗೆ ಸಿಕ್ಕಿರುವುದು 2 ಲಕ್ಷ ಟನ್ ಆಹಾರ ಪದಾರ್ಥಗಳು ಮಾತ್ರ ಎಂದು ಆಪಾದಿಸಿದರು.
ಕುಡಿಯುವ ನೀರಿನ ಪೂರೈಕೆಗಾಗಿ ರಾಜ್ಯ ಸರ್ಕಾರ ಈವರೆಗ 37 ಕೋಟಿ ರುಪಾಯಿಗಳನ್ನು ಒದಗಿಸಿದೆ. ಕೆಲವು ಜಿಲ್ಲೆಗಳಲ್ಲಿ ಅವಧಿಗೆ ಮುನ್ನ ಮಾನ್ಸೂನ್ ಮಳೆ ಬಿದ್ದಿರುವುದರಿಂದ, ಪ್ರಸ್ತುತ ರಾಜ್ಯದ 42 ತಾಲ್ಲೂಕುಗಳಲ್ಲಿ ಮಾತ್ರ ಬರದ ಛಾಯೆಯಿದೆ ಎಂದು ಎಂದು ಶ್ರೀಕಂಠಯ್ಯ ಹೇಳಿದರು.
ಕುಡಿಯುವ
ನೀರಿಗೆ
ಕೊರೆ,
ಮೇವಿಗೆ
ಬರ
ತೀವ್ರ
ಬರ
ಪೀಡಿತ
ಪ್ರದೇಶವೆಂದು
ಕರ್ನಾಟಕವನ್ನು
ಘೋಷಿಸಲು
ಕೇಂದ್ರ
ಸರ್ಕಾರವನ್ನು
ಒತ್ತಾಯಿಸಿರುವ
ಪ್ರದೇಶ
ಕಾಂಗ್ರೆಸ್
ಅಧ್ಯಕ್ಷ
ಅಲ್ಲಂ
ವೀರಭದ್ರಪ್ಪ
,
ಬರ
ಪರಿಹಾರ
ಕಾಮಗಾರಿಗಳಿಗಾಗಿ
500
ಕೋಟಿ
ರುಪಾಯಿಗಳ
ನೆರವು
ನೀಡುವಂತೆ
ಕೇಂದ್ರ
ಸರ್ಕಾರವನ್ನು
ಆಗ್ರಹಿಸಿದ್ದಾರೆ.
ಕುಡಿಯುವ
ನೀರಿನ
ಕೊರತೆಯಿಂದಾಗಿ
ರಾಜ್ಯದ
ಜನತೆ
ತತ್ತರಿಸುತ್ತಿದ್ದು
,
ಜಾನುವಾರುಗಳಿಗೆ
ಮೇವಿನ
ಕೊರತೆ
ಎದುರಾಗಿದೆ.
ಬರ
ಪರಿಸ್ಥಿತಿಯನ್ನು
ಎದುರಿಸಲು
ರಾಜ್ಯ
ಸರ್ಕಾರ
ತನ್ನಿಂದ
ಸಾಧ್ಯವಿರುವ
ಎಲ್ಲ
ಕ್ರಮಗಳನ್ನು
ಕೈಗೊಂಡಿದೆ
ಎಂದು
ಸೋಮವಾರ
ಸುದ್ದಿಗಾರರೊಂದಿಗೆ
ಮಾತನಾಡಿದ
ಅಲ್ಲಂ
ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...