ಪ್ರಧಾನಿಯಾದ ಮೊದಲ ಕನ್ನಡಿಗ ದೇವೇಗೌಡ ; ಹೆಗಡೆ ರಾಷ್ಟ್ರಪತಿ ಆಗಬಾರದೇಕೆ?
ಬೆಂಗಳೂರು : ರಾಷ್ಟ್ರಪತಿ ಚುನಾವಣೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ವಿವಿಧ ಧುರೀಣರ ಹೆಸರುಗಳು ದೇಶದ ಪರಮೋಚ್ಛ ಹುದ್ದೆಗೆ ಚಾಲ್ತಿಯಲ್ಲಿದ್ದು , ಈ ಸಾಲಿಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರು ಈಗ ಸೇರಿಕೊಂಡಿದೆ.
ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಬೇಕೆಂದು ಕನ್ನಡ ಚಳವಳಿ ಹೋರಾಟಗಾರ ಜಿ.ನಾರಾಯಣ ಕುಮಾರ್ ಅವರು, ಪ್ರಧಾನಿ ವಾಜಪೇಯಿ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಅತ್ಯುತ್ತಮ ಆಡಳಿತಗಾರರಾಗಿರುವ ಹೆಗಡೆ ದೇಶದ ಹಿರಿಯ ರಾಜಕಾರಣಿಗಳಲ್ಲೊಬ್ಬರು. ಎಚ್.ಡಿ.ದೇವೇಗೌಡ ಅವರು ಪ್ರಧಾನಿ ಹುದ್ದೆಗೇರಿದ ಮೊದಲ ಕನ್ನಡಿಗ ಎನ್ನುವ ಕೀರ್ತಿ ಪಡೆದಿದ್ದಾರೆ. ಅದೇ ರೀತಿ ಹೆಗಡೆ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲು ರಾಜ್ಯದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ನಾರಾಯಣಕುಮಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜೂನ್
ತಿಂಗಳ
ಕೊನೆಯ
ವಾರದಲ್ಲಿ
ದೆಹಲಿಗೆ
200
ಮಂದಿಯ
ನಿಯೋಗವೊಂದನ್ನು
ತಾವು
ಒಯ್ಯುತ್ತಿದ್ದು
,
ಹೆಗಡೆ
ಅವರನ್ನು
ರಾಷ್ಟ್ರಪತಿ
ಹುದ್ದೆಗೆ
ಆಯ್ಕೆ
ಮಾಡಬೇಕೆಂದು
ವಿವಿಧ
ರಾಜಕೀಯ
ಪಕ್ಷಗಳ
ಮುಖಂಡರಿಗೆ
ಮನವಿ
ಪತ್ರ
ಸಲ್ಲಿಸಲಾಗುವುದು.
ಈ
ಮನವಿ
ಪತ್ರಕ್ಕೆ
ನಾಡಿನ
ಪ್ರಮುಖ
ರಾಜಕಾರಣಿಗಳು,
ಸಾಹಿತಿಗಳು,
ಕಲಾವಿದರು,
ಬುದ್ಧಿಜೀವಿಗಳು,
ಅಧ್ಯಾಪಕರು
ಹಾಗೂ
ಮಹಿಳಾ
ಸಂಘಟನೆಗಳ
ಸದಸ್ಯರಿಂದ
ಸಹಿ
ಪಡೆಯಲಾಗುವುದು
ಎಂದು
ನಾರಾಯಣಕುಮಾರ್
ತಿಳಿಸಿದರು.
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...