ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಶಿಕಾರಿ ಕೆಲವೇ ಇಂಚು ದೂರ : ಜಯಲಲಿತಾ ಭರವಸೆ

By Staff
|
Google Oneindia Kannada News

ಚೆನ್ನೈ: ಕಾಡುಗಳ್ಳ ವೀರಪ್ಪನ್‌ ಬಂಧನದ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಹಾಗೂ ಅವನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾ ತಿಳಿಸಿದರು.

ವೀರಪ್ಪನನ್ನು ಬಂಧಿಸುವ ನಿಟ್ಟಿನಲ್ಲಿ ತಮಿಳುನಾಡು ವಿಶೇಷ ಕಾರ್ಯಪಡೆಯು (ಎಸ್‌ಟಿಎಫ್‌) ವಾಲ್ಟರ್‌ ದಾವರಂ ನಾಯಕತ್ವದಲ್ಲಿ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ವಿಧಾನ ಸಭೆಯ ಚರ್ಚಾವೇಳೆಯಲ್ಲಿ ಜಯಲಲಿತಾ ತಿಳಿಸಿದರು.

ಡಿಎಂಕೆ ಆಡಳಿತದ ಸಮಯದಲ್ಲಿ ವೀರಪ್ಪನನ್ನು ಬಂಧಿಸುವಲ್ಲಿ ಎಸ್‌ಟಿಎಫ್‌ ಒಮ್ಮೆಯೂ ಸಹ ಪ್ರಯತ್ನಿಸಲಿಲ್ಲ ಎಂದು ಮುಖ್ಯಮಂತ್ರಿಗಳು ತಮಿಳು ಮನಿಲಾ ಕಾಂಗ್ರೆಸ್‌ ಸದಸ್ಯ ಸಿ. ಜ್ಞಾನ ಶೇಖರನ್‌ ಅವರ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.

ವೀರಪ್ಪನನ್ನು ಹಿಡಿಯುವಲ್ಲಿ ಕರ್ನಾಟಕ ಹಾಗೂ ತಮಿಳು ನಾಡಿನ ಕಾರ್ಯ ಪಡೆಗಳಲ್ಲಿ ಅತೀವ ಹೊಂದಾಣಿಕೆಯಿದ್ದು, ಅವನ ಬಂಧನ ಅತಿ ಶೀಘ್ರದಲ್ಲೇ ಆಗಲಿದೆ ಎಂಬ ವಿಶ್ವಾಸವನ್ನೂ ಸಹ ಜಯಲಲಿತಾ ವ್ಯಕ್ತಪಡಿಸಿದರು.

(ಪಿಟಿಐ)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X