ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸ್ತಿತ್ವ ವಿವಾದ : ಮುಂಬಯಿ ಇಸ್ಕಾನ್‌ ಕೇಂದ್ರಕ್ಕೆ ರಾಜ್ಯಹೈಕೋರ್ಟ್‌ ಎಚ್ಚರಿಕೆ

By Staff
|
Google Oneindia Kannada News

International Society of Krishna Conscious _logoಬೆಂಗಳೂರು: ನಗರದ ಇಸ್ಕಾನ್‌ ಕೇಂದ್ರ ವ್ಯವಹಾರಗಳಲ್ಲಿ ಮೂಗು ತೂರಿಸಬಾರದು ಎಂದು ರಾಜ್ಯ ಹೈಕೋರ್ಟ್‌ ಮುಂಬಯಿ ಇಸ್ಕಾನ್‌ ಕೇಂದ್ರಕ್ಕೆ ಆದೇಶ ನೀಡಿದೆ.

ಸ್ವತಂತ್ರವಾಗಿ ಗುರುತಿಸಿಕೊಂಡಿರುವ ಬೆಂಗಳೂರು ಇಸ್ಕಾನ್‌ ಕೇಂದ್ರ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ತನ್ನ ಆಸ್ತಿಯನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಹಕ್ಕನ್ನು ಹೊಂದಿದೆ ಎಂದು ಶುಕ್ರವಾರ ಕೋರ್ಟ್‌ ತೀರ್ಪಿತ್ತಿದೆ.

ಬೆಂಗಳೂರು ಇಸ್ಕಾನ್‌ ಕೇಂದ್ರದ ಅಧ್ಯಕ್ಷರಾಗಿರುವ ಮಧು ಪಂಡಿತ ದಾಸ್‌ ಅವರು ಮುಂಬಯಿ ಕೇಂದ್ರದ ಪರವಾಗಿ ಆಸ್ತಿ ಮತ್ತಿರ ವಿಷಯಗಳನ್ನು ನಿಭಾಯಿಸುತ್ತಿರುವರೇ ಹಾಗೂ, ಮುಂಬಯಿ ಇಸ್ಕಾನ್‌ ಕೇಂದ್ರಕ್ಕೆ ಮಧುಪಂಡಿತ ದಾಸ್‌ ಅವರನ್ನು ಸ್ಥಾನದಿಂದ ತೆಗೆದು ಹಾಕುವ ಹಕ್ಕಿದೆಯೇ ಎಂಬ ಬಗ್ಗೆ ಕೋರ್ಟ್‌ ಏನನ್ನೂ ಹೇಳಿಲ್ಲ. ಹೆಚ್ಚುವರಿ ತನಿಖೆ ಹಾಗೂ ವಿಚಾರಣೆಯ ನಂತರ ಈ ಬಗ್ಗೆ ಕೋರ್ಟ್‌ ತೀರ್ಪು ನೀಡಲಿದೆ.

ಬೆಂಗಳೂರು ಇಸ್ಕಾನ್‌ನ್ನು ಸ್ವತಂತ್ರ ಅಸ್ತಿತ್ವ ಇರುವ ಸಂಸ್ಥೆಯೆಂದು ಪರಿಗಣಿಸುವಂತೆ ಕೋರಿ ಇಸ್ಕಾನ್‌ ಕಾರ್ಯದರ್ಶಿ ಸ್ಟೋಕಾ ಕೃಷ್ಣ ದಾಸ ಕೋರ್ಟ್‌ ಮೊರೆ ಹೋಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X