ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿದು ಬರಿ ನಗರಿಯಲ್ಲೋ ಅಣ್ಣಾ ...

By Staff
|
Google Oneindia Kannada News

‘ಶಿಲ್ಪಕಾವ್ಯ’ ವಿಧಾನಸೌಧ, ಗ್ರೀಕೋ- ರೋಮನ್‌ ಶೈಲಿಯ ಹೈಕೋರ್ಟ್‌, ಮಣ್ಣು ಮತ್ತು ಮರದಿಂದ ನಿರ್ಮಿಸಿದ ಟಿಪ್ಪು ಬೇಸಗೆ ಅರಮನೆ- ಈ ಪರಿಯಾಗಿ ಬೆಂಗಳೂರು ಮಹಾನಗರಿಯ ಕಟ್ಟಡಗಳ ವೈಭವ ದೊಡ್ಡದು. ಕನ್ನಡದ ಹಿರಿಮೆಯಂತೆ, ಕನ್ನಡಿಗರ ಮನೋ ವೈಶಾಲ್ಯದಂತೆ ಅವರ ವಾಸ್ತು ಅಭಿರುಚಿಯೂ ಹಿರಿದು, ಅಪರೂಪದ್ದು .

ಈ ಬೇಸಗೆಯಲ್ಲಿ ನೀವೇಕೆ ಬೆಂಗಳೂರಿನ ವಾಸ್ತು ಶಿಲ್ಪ ವೈಭವವನ್ನೊಮ್ಮೆ ಕಣ್ತುಂಬಿಸಿಕೊಳ್ಳಬಾರದು. ಈ ಶಿಲ್ಪ ವೈಭವದ ದರ್ಶನ ಬರಿ ಪ್ರವಾಸ ಮಾತ್ರವಲ್ಲ - ಕನ್ನಡ ಪರಂಪರೆ, ಸಂಸ್ಕೃತಿ, ಇತಿಹಾಸದ ದರ್ಶನವೂ ಹೌದು. ಅಷ್ಟೇ ಅಲ್ಲ , ಎಂಥ ದಣಿವನ್ನೂ ಕಳೆಯುವಂಥ ಜೀವದಾಯಿ ಲಾಲ್‌ಬಾಗ್‌ ಉದ್ಯಾನ ಬೆಂಗಳೂರಿನಲ್ಲಿದೆ. ವಿಶ್ವ ಪ್ರಸಿದ್ಧ ಈ ಸಸ್ಯಕಾಶಿಯನ್ನ ಹೈದರ್‌ ಆಲಿ ಹಾಗೂ ಟಿಪ್ಪು ಅಭಿವೃದ್ಧಿಪಡಿಸಿದ್ದರು.

ಬೆಂಗಳೂರು ಸಾಂಪ್ರಾದಾಯಿಕ ಕುಶಲ ಕಲೆಗಳಿಗೂ ಹೆಸರುವಾಸಿ. ಈ ಸುತ್ತಾಟದಲ್ಲಿ ಇಂಥ ಕುಶಲಕಲೆಗಳನ್ನೂ ಕಾಣಬಹುದು. ಟೆರ್ರಾ ಕೊಟ್ಟ ಸ್ಟುಡಿಯೋ ಭೇಟಿಯ ಕಾರ್ಯಕ್ರಮವೂ ಇದೆ.

ಬೆಂಗಳೂರು ದರ್ಶನ ಮಾಡುವ ಆಸೆ ನಿಮಗಿದೆಯಾ?

ಸಹಾಯ ಬೇಕೆ? ಪ್ರಿಯಾ ಅವರನ್ನು ಸಂಪರ್ಕಿಸಿ- ಫೋನು : 91805735289
ಇ- ಮೇಲ್‌ :
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X