ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೇಕಾದರೆ ವೀರಪ್ಪನ್ ಬಳಿಗೆ ನಾನೇ ಹೋಗುವೆ : ಡಾ.ಸುದರ್ಶನ್
ಮಡಿಕೇರಿ : ನನ್ನನ್ನು ವೀರಪ್ಪನ್ ಅಪಹರಿಸುವ ಅಗತ್ಯವಿಲ್ಲ. ನಾನೇ ಆತನ ಬಳಿಗೆ ಹೋಗಲು ರೆಡಿ ಎಂದು ಆರೋಗ್ಯ ಕಾರ್ಯಪಡೆ ಮುಖ್ಯಸ್ಥ ಡಾ.ಎಚ್.ಸುದರ್ಶನ್ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸುದರ್ಶನ್, ವೀರಪ್ಪನ್ಗೂ ನನ್ನ ಈ ಸಂದೇಶ ಮುಟ್ಟಿರಬಹುದು ಎಂದಿದ್ದಾರೆ. ನನಗೇನೂ ವೀರಪ್ಪನ್ ಜೊತೆ ಇರಲು ಭಯವಿಲ್ಲ. ನನ್ನನ್ನು ಆತ ಕದ್ದೊಯ್ಯುವ ಪ್ರಮೇಯವೇ ಇಲ್ಲ. ಬೇಕಾದರೆ ನಾನೇ ಹೋಗುತ್ತೇನೆ. ಒಂದು ತಿಂಗಳು ಅಲ್ಲಿದ್ದು ಬರುತ್ತೇನೆ ಎಂದು ಸುದರ್ಶನ್ ತಿಳಿಸಿದ್ದಾರೆ.
ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್, ಸುದರ್ಶನ್ ಮತ್ತಿತರರನ್ನು ವೀರಪ್ಪನ್ ಅಪಹರಿಸಲಿದ್ದಾನೆ ಎಂಬ ಸುದ್ದಿ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಸುದರ್ಶನ್ ಕೊಟ್ಟಿರುವ ದಿಟ್ಟ ಉತ್ತರವಿದು.
(ಇನ್ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
Story first published: Wednesday, April 17, 2002, 5:30 [IST]