ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾನತ್ತುಗೊಂಡಿದ್ದ ಇಬ್ಬರು ಇನ್ಸ್‌ಪೆಕ್ಟರ್‌ಗಳಿಗೆ ಸಾಂಗ್ಲಿಯಾನ ಜೀವದಾನ

By Staff
|
Google Oneindia Kannada News

ಬೆಂಗಳೂರು : ಸಾಂಗ್ಲಿಯಾನ ಕೆಂಗಣ್ಣಿಗೆ ಗುರಿಯಾಗಿ ಅಮಾನತ್ತಿಗೆ ಒಳಪಟ್ಟಿದ್ದ ಇಬ್ಬರು ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಿಗೆ ಜೀವದಾನ. ಹಸನಾಗಿ ಕೆಲಸ ಮಾಡಿ, ಸೈ ಎನಿಸಿಕೊಳ್ಳಿ ಎಂದು ಎಚ್ಚರಿಕೆ ಕೊಟ್ಟಿರುವ ಸಾಂಗ್ಲಿಯಾನ ಅಮಾನತ್ತನ್ನು ರದ್ದು ಪಡಿಸಿದ್ದಾರೆ.

ಬಸವೇಶ್ವರನಗರ ಠಾಣೆಯ ಕೌರಿ ಮತ್ತು ಕೆ.ಆರ್‌.ಪುರದ ವೆಂಕಟರಮಣ ಅವರು ಸಾಂಗ್ಲಿಯಾನರಿಂದ ಜೀವದಾನ ಪಡೆದ ಇನ್ಸ್‌ಪೆಕ್ಟರ್‌ಗಳು. ಇವರಿಬ್ಬರ ಕಾರ್ಯಕ್ಷೇತ್ರದಲ್ಲಿ ಅಪರಾಧ ಹೆಚ್ಚಾದ ಕಾರಣ ಸಾಂಗ್ಲಿಯಾನ ಶಿಸ್ತು ಕ್ರಮ ತೆಗೆದುಕೊಂಡಿದ್ದರು.

ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ಕಾರಣಕ್ಕೆ ಇನ್ಸ್‌ಪೆಕ್ಟರ್‌ಗಳನ್ನು ಅಮಾನತ್ತುಗೊಳಿಸಿದ್ದೆ. ಆದರೀಗ ಅವರಿಗೆ ಇನ್ನೊಂದು ಅವಕಾಶ ಕೊಡಬೇಕು ಅನ್ನಿಸಿದೆ. ತಾವು ಮಾಡಿರುವ ತಪ್ಪಿನ ಅರಿವು ಇನ್ಸ್‌ಪೆಕ್ಟರುಗಳಿಗೆ ಆಗಿದೆ. ಇನ್ನು ಮುಂದೆ ಶ್ರದ್ಧೆಯಿಂದ ಕೆಲಸ ಮಾಡುವರೆಂಬ ನಂಬಿಕೆ ನನ್ನದು. ಅದನ್ನು ಹುಸಿಯಾಗಿಸಿದರೆ ಮತ್ತೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಾಂಗ್ಲಿಯಾನ ಹೇಳಿದರು.

ಜನರಿಗೆ ಕರೆ : ಬೆಂಗಳೂರಿನ ಅನೇಕ ಜನರಿಗೆ ತಾವು ಯಾವ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ಸೇರುತ್ತೇವೆ ಎಂಬುದೇ ಗೊತ್ತಿಲ್ಲ. ಈ ಗೊಂದಲವನ್ನು ಹೋಗಲಾಡಿಸಲು ಜನ ತಮ್ಮ ಹತ್ತಿರದ ಪೊಲೀಸ್‌ ಠಾಣೆಗೆ ಫೋನಾಯಿಸಿ, ತಮ್ಮ ನಿವಾಸ ಯಾವ ಠಾಣೆಯ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ತುರ್ತು ಸನ್ನಿವೇಶಗಳಲ್ಲಿ ಬೇಗನೆ ಪೊಲೀಸರನ್ನು ಸಂಪರ್ಕಿಸುವುದು ಇದರಿಂದ ಸುಲಭವಾಗಲಿದೆ ಎಂದು ಸಾಂಗ್ಲಿಯಾನ ಕರೆ ಕೊಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X