ಕಾಲಹರಣ ಮಾಡಬೇಡಿ : ರಾಜಕಾರಣಿಗಳಿಗೆ ಆದಿಚುಂಚನಗಿರಿ ಸ್ವಾಮೀಜಿ ಸಲಹೆ
ಬೆಂಗಳೂರು : ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾ ಕಾಲ ಹರಣ ಮಾಡುವ ಬದಲು ಸಮಾಜದಲ್ಲಿ ಹೆಚ್ಚುತ್ತಿರುವ ಆರ್ಥಿಕ ಮತ್ತು ಧಾರ್ಮಿಕ ಸಮಸ್ಯೆಗಳನ್ನು ಬಗೆಹರಿಸಲು ರಾಜಕಾರಣಿಗಳು ಟೊಂಕಕಟ್ಟಿ ನಿಲ್ಲಬೇಕು ಎಂದು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ರಾಜಕಾರಣಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ಧಾರ್ಮಿಕ ವಿಷಯಗಳನ್ನು ಚರ್ಚಿಸಿ ರಾಜಕೀಯ ಲಾಭಗಳಿಸಲು ಯತ್ನಿಸುತ್ತಿರುವವರನ್ನು ಕಂಡರೆ ತುಂಬಾ ಬೇಜಾರಾಗುತ್ತದೆ ಎಂದು ಸ್ವಾಮೀಜಿ ಹೇಳಿದರು. ಅವರು ಜಮಾಯತ್-ಎ-ಇಸ್ಲಾಮಿ- ಹಿಂದ್ ಸಂಘಟನೆ ಆಯೋಜಿಸಿದ್ದ ‘ಮತ ಮತ್ತು ಭಯೋತ್ಪಾದನೆ’ ಎಂಬ ವಿಚಾರಸಂಕಿರಣದಲ್ಲಿ ಮಾತನಾಡುತ್ತಿದ್ದರು. ಕೋಮುವಾದೀ ಶಕ್ತಿಗಳನ್ನು ಕಟುವಾಗಿ ಟೀಕಿಸಿದ ಸ್ವಾಮೀಜಿ, ದೇಶದ ಏಕತೆಯನ್ನು ಹಾಳುಗೆಡವುವ ಇಂತಹ ಶಕ್ತಿಗಳಿಂದ ಭಾರತೀಯರ ಒಗ್ಗಟ್ಟಿಗೆ ಹಾನಿಯಾಗುವುದಿಲ್ಲ ಎಂದರು.
ರಾಜಕಾರಣಿಗಳು ಕೇವಲ ಮತ ಹಾಗೂ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡಬಾರದು. ದೇಶದ ಒಳಿತನ್ನು ಮುಖ್ಯ ಧ್ಯೇಯವನ್ನಾಗಿಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಸಂಗಮ ವಾರಪತ್ರಿಕೆಯ ಸಂಪಾದಕ ಇಬ್ರಾಹಿಂ ಸಯ್ಯೀದ್, ಇಸ್ಲಾಂ ಮತ್ತು ಜಿಹಾದ್ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನ ನಡೆಯಬೇಕು ಎಂದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...