ಮಂಗಳವಾರ ಸರ್ಕಾರಿ ಕಚೇರಿಗಳು, ಬ್ಯಾಂಕುಗಳ ಸಾಂಕೇತಿಕ ಮುಷ್ಕರ
ಬೆಂಗಳೂರು : ರಾಜ್ಯದ ಎಲ್ಲ ಸಾರ್ವಜನಿಕ ವಲಯ, ನಿಗಮ, ಮಂಡಳಿ ಮತ್ತು ಬ್ಯಾಂಕ್ ನೌಕರರು ಮಂಗಳವಾರ ಸಾಂಕೇತಿಕ ಮುಷ್ಕರ ನಡೆಸಲಿದ್ದಾರೆ.
ದೇಶಾದ್ಯಂತ ನಡೆಯಲಿರುವ ಮುಷ್ಕರಕ್ಕೆ ರಾಜ್ಯ ಬೆಂಬಲ ಕೊಡಲಿದ್ದು, ನಾಳೆ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೆಲಸ ಮಾಡುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಪ್ಪೇಗೌಡ ತಿಳಿಸಿದ್ದಾರೆ. ಸಾರ್ವಜನಿಕ ವಲಯದ ಕಂಪನಿಗಳನ್ನು, ನಿಗಮಗಳನ್ನು ಮುಚ್ಚುವುದು ಹಾಗೂ ಖಾಸಗಿಯವರಿಗೆ ಮಾರಾಟ ಮಾಡುವ ಸರ್ಕಾರದ ಧೋರಣೆಯನ್ನು ಖಂಡಿಸಿ ಈ ಮುಷ್ಕರವನ್ನು ಸರ್ಕಾರಿ ಸಂಸ್ಥೆಗಳು ನಡೆಸಲಿವೆ.
ಬ್ಯಾಂಕ್ ನೌಕರರ ಮುಷ,್ಕರ : ಸಾರ್ವಜನಿಕ ವಲಯದ ಷೇರುಗಳ ನೇರ ಮಾರಾಟ, ಸಿಬ್ಬಂದಿ ಸಂಖ್ಯೆಯಲ್ಲಿ ಕಡಿತ ಹಾಗೂ ಖಾಸಗೀಕರಣ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಕರೆ ಕೊಟ್ಟಿರುವ ಮುಷ್ಕರದಲ್ಲಿ ರಾಜ್ಯದ ಬ್ಯಾಂಕ್ ನೌಕರರೂ ಮಂಗಳವಾರ ಭಾಗವಹಿಸಲಿದ್ದಾರೆ ಎಂದು ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಸಂತರಾಯ್ ಹೇಳಿದ್ದಾರೆ.
ದೇಶ ಹಿಂದೆಂದೂ ಕಂಡಿರದಂಥ ಮುಷ್ಕರ ಇದಾಗಿದ್ದು, ಸರ್ಕಾರದ ನಡಾವಳಿಗೆ ತಕ್ಕ ಪಾಠವಾಗಲಿದೆ ಎಂಬುದು ಮುಷ್ಕರದಲ್ಲಿ ಭಾಗವಹಿಸಲು ನಿರ್ಧರಿಸಿರುವ ವಿವಿಧ ಸಂಘಟನೆಗಳ ಅಂಬೋಣ. ಮಂಗಳವಾರ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್ಗಳಲ್ಲಿ ಸಾಕಷ್ಟು ಸಿಬ್ಬಂದಿ ಇರುವುದಿಲ್ಲ ಎಂಬುದು ಖಾತ್ರಿಯಾಗಿದ್ದು, ಜನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...