ತಿಮ್ಮಪ್ಪನಿಗೆ ಬೇಸಗೆ ಬೋನಸ್ಸು , ತಿರುಪತಿಗೆ 50 ಲಕ್ಷ ಭಕ್ತರ ನಿರೀಕ್ಷೆ !
ತಿರುಪತಿ : ನಡು ಬೇಸಗೆಯಲ್ಲಿ ತಿರುಪತಿ- ತಿರುಮಲದ ಏಡು ಕೊಂಡಲವಾಡ ವೆಂಕಟೇಶ್ವರನ ದರ್ಶನಕ್ಕೆ ಭಕ್ತರ ಮಹಾಪೂರದ ನಿರೀಕ್ಷೆಯಲ್ಲಿರುವ ದೇವಸ್ಥಾನದ ಆಡಳಿತ ಮಂಡಳಿ ವಿಶೇಷ ಸಿದ್ಧತೆಗಳನ್ನು ನಡೆಸಿದೆ.
ಬೇಸಗೆ ಸೀಜನ್ನಲ್ಲಿ 50 ಲಕ್ಷಕ್ಕೂ ಹೆಚ್ಚು ಭಕ್ತರು ವಿಶ್ವದ ವಿವಿಧ ಭಾಗಗಳಿಂದ ತಿರುಪತಿಗೆ ಆಗಮಿಸಬಹುದೆಂದು ದೇವಸ್ಥಾನದ ಆಡಳಿತ ಮಂಡಳಿ ಅಂದಾಜು ಮಾಡಿದೆ. ಶುಕ್ರವಾರ, ಶನಿವಾರ, ಭಾನುವಾರ ಹಾಗೂ ಸೋಮವಾರ ದೇಗುಲಕ್ಕೆ ಆಗಮಿಸುವ ಭಕ್ತರು ಕೇವಲ ದರ್ಶನಕ್ಕಷ್ಟೇ ತೃಪ್ತರಾಗಬೇಕಿದೆ. ಆ ದಿನಗಳಲ್ಲಿ ಸಾಂಪ್ರದಾಯಿಕ ವಿಧಿಗಳಾದ ಅರ್ಚನ ಸೇವಾ ಹಾಗೂ ತೋಮಲ ಸೇವಾಗಳನ್ನು ಆಡಳಿತ ಮಂಡಳಿ ಸದ್ಯಕ್ಕೆ ನಿಲ್ಲಿಸಿದೆ.
ಭಕ್ತರಿಗೆ
ಲಘು
ದರ್ಶನ
ಎನ್ನುವ
ನೂತನ
ಸವಲತ್ತನ್ನು
ಜಾರಿಗೆ
ತರಲು
ಟಿಟಿಡಿ
ಆಡಳಿತ
ಮಂಡಳಿ
ಉದ್ದೇಶಿಸಿದೆ.
ಲಘು
ದರ್ಶನದ
ಅನ್ವಯ
ಸುಮಾರು
40
ಅಡಿ
ದೂರದಿಂದ
ಬಾಲಾಜಿಯ
ದರ್ಶನ
ಪಡೆಯಲು
ಅವಕಾಶವಿದೆ.
ಶಾಲಾ
ಕಾಲೇಜುಗಳಿಗೆ
ಬೇಸಗೆ
ರಜೆಯ
ಹಿನ್ನೆಲೆಯಲ್ಲಿ
ಕರ್ನಾಟಕದಿಂದಲೂ
ತಿರುಪತಿಗೆ
ಭಕ್ತರ
ಪೂರವನ್ನು
ನಿರೀಕ್ಷಿಸಲಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...