ಕನ್ನಡ ಸಂಸ್ಕೃತಿ ಪ್ರತೀಕ ಬೆಂಗಳೂರು ಸಂತೆಗೆ ಕಾರಾಗೃಹದ ವಿಶಾಲ ಮೈದಾನ?
ಬೆಂಗಳೂರು : ಕನ್ನಡ ಸಂಸ್ಕೃತಿ ಮತ್ತು ಜಾನಪದದ ಬಗೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ‘ಬೆಂಗಳೂರು ಸಂತೆ’ ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು , ಈ ಸಂತೆಯನ್ನು ಶೇಷಾದ್ರಿ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದ ಜಾಗೆಯಲ್ಲಿ ನಡೆಸುವಂತೆ ವಿವಿಧ ಪ್ರಮುಖರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಗ್ರಾಮೀಣ ಕುಶಲ ಕಲೆಗಳು ಹಾಗೂ ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬೆಂಗಳೂರು ಸಂತೆಯನ್ನು ನಡೆಸುವ ಸರ್ಕಾರದ ಉದ್ದೇಶ ಸ್ವಾಗತಾರ್ಹ. ಇಂಥ ಸಂತೆಯನ್ನು ಮಧ್ಯಮ, ಕೆಳ ಮಧ್ಯಮ ವರ್ಗದವರು ಸಂಸಾರ ಸಮೇತ ಬರಲು ಅನುಕೂಲವಾಗುವ ನಗರದ ಕೇಂದ್ರ ಪ್ರದೇಶವಾದ ಕೇಂದ್ರ ಕಾರಾಗೃಹದ ಮೈದಾನದಲ್ಲಿ ನಡೆಸುವುದು ಸೂಕ್ತ ಎಂದು ಪ್ರಕಟಣೆಯಾಂದರಲ್ಲಿ ಬೆಂಗಳೂರು ಸಂತೆಯ ಕಾರ್ಯ ಕಾರಿ ಸಮಿತಿ ಅಧ್ಯಕ್ಷ ಪ್ರಸನ್ನ , ಸದಸ್ಯರಾದ ಕೆ.ಮರುಳಸಿದ್ಧಪ್ಪ , ಸತ್ಯು , ವಿಮಲ ರಂಗಾಚಾರ್, ಎಂ.ಎಸ್.ನಂಜುಂಡರಾವ್, ಮಧುರ ಛತ್ರಪತಿ ಅವರು ತಿಳಿಸಿದ್ದಾರೆ.
ಬೆಂಗಳೂರು
ಸಂತೆಗೆ
ಬರುವ
ನಾಗರಿಕರಿಗೆ
ಗುಡಿ
ಕೈಗಾರಿಕೆಗಳು
ಮಾತ್ರವಲ್ಲದೆ,
ಕನ್ನಡ
ಸಂಸ್ಕೃತಿ
ಹಾಗೂ
ಜಾನಪದದ
ಕುರಿತೂ
ಅರಿವು
ಮೂಡಿಸಬೇಕಾಗಿದೆ.
ಸಂತೆಯಲ್ಲಿ
ಕನ್ನಡ
ಸಂಸ್ಕೃತಿ
ವಾತಾವರಣವನ್ನು
ರೂಪಿಸಲು
ಸರ್ಕಾರ
ಕ್ರಮ
ಕೈಗೊಳ್ಳಬೇಕು
ಎಂದೂ
ಈ
ಗಣ್ಯರು
ಆಗ್ರಹಿಸಿದ್ದಾರೆ.
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...